ADVERTISEMENT

ಸಂಸದರ ಬೆಂಗಾವಲು ವಾಹನ‌ ಪಲ್ಟಿ; ಗಾಯ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 6:01 IST
Last Updated 14 ಮಾರ್ಚ್ 2023, 6:01 IST
ಸಂಸದ ಡಾ. ಉಮೇಶ ಜಾಧವ್ ಅವರು ವಾಹನ ಪಲ್ಟಿಯಿಂದಾಗಿ ಗಾಯಗೊಂಡ ಸಿಬ್ಬಂದಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು
ಸಂಸದ ಡಾ. ಉಮೇಶ ಜಾಧವ್ ಅವರು ವಾಹನ ಪಲ್ಟಿಯಿಂದಾಗಿ ಗಾಯಗೊಂಡ ಸಿಬ್ಬಂದಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು   

ಕಲಬುರಗಿ: ಸಂಸದ ಡಾ. ಉಮೇಶ ಜಾಧವ್ ಅವರ ಬೆಂಗಾವಲು ವಾಹನ ಸೇಡಂ ರಸ್ತೆಯ ಮೆಹತಾ ಶಾಲೆಯ ಬಳಿ ಸೋಮವಾರ ರಾತ್ರಿ ಪಲ್ಟಿಯಾಗಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಜಾಧವ ಅವರು ಕಲಬುರಗಿಯಿಂದ ಬೆಡಸೂರ ತಾಂಡಾಕ್ಕೆ ಹೋಗುತ್ತಿರುವಾಗ ಸ್ಪಿಡ್ ಬ್ರೇಕರ್ ಬಳಿ ಬೆಂಗಾವಲು ವಾಹನ ಪಲ್ಟಿಯಾಯಿತು. ವಾಹನದಲ್ಲಿದ್ದ ಎಎಸ್‌ಐ ಸಲೀಂ, ಚಾಲಕ‌ ಮಾಳಪ್ಪ, ಸಂಸದರ ಅಂಗರಕ್ಷಕ ಹಣಮಂತ ಪೂಜಾರಿ ಅವರಿಗೆ ಗಾಯವಾಗಿದ್ದು ಜಾಧವ ಅವರು ಬೆಂಗಾವಲು ವಾಹನದ ಪೊಲಿಸ್ ಸಿಬ್ಬಂದಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ ನಂತರ ತಮ್ಮ‌ ವಾಹನದಲ್ಲಿ ಜಿಮ್ಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT