ಕಲಬುರ್ಗಿ: ಇಲ್ಲಿನ ಆಳಂದ ರಸ್ತೆಯಲ್ಲಿರುವ ಮಹಿಳಾ ನಿಲಯದ ಆವರಣದಲ್ಲಿ ಯುವಕನನ್ನು ಬುಧವಾರ ಸಂಜೆ ಕೊಲೆ ಮಾಡಲಾಗಿದೆ.
ದೇವಿ ನಗರದ ನಿವಾಸಿ ಶೀತಲ್ ಜೈನ್ (35) ಕೊಲೆಯಾದ ಯುವಕ.
ತನಗೆ ಪರಿಚಯದ ಆಫ್ರೀನ್ ಎಂಬ ಮಹಿಳೆಯ ಇಬ್ಬರು ಮಕ್ಕಳು ಮಹಿಳಾ ನಿಲಯದಲ್ಲಿದ್ದರು. ಅವರನ್ನು ಕರೆದುಕೊಂಡು ಹೋಗಲು ಆಫ್ರೀನ್ ಜೊತೆಗೆ ಶೀತಲ್ ಬಂದಿದ್ದರು. ಈ ಬಗ್ಗೆ ಮಾಹಿತಿ ಪಡೆದ ಮಹಿಳೆಯ ಸಹೋದರರಾದ ಅಮ್ಜದ್ ಮತ್ತು ಮೆಹಬೂಬ್ ಎಂಬುವವರು ಉದ್ದನೆಯ ಕುಡುಗೋಲಿನಿಂದ ಮುಖಕ್ಕೆ ಹೊಡೆದರು. ನಂತರ ಕಲ್ಲು ಎತ್ತಿ ಅಲ್ಲಿಂದ ಪರಾರಿಯಾಗಿದ್ದಾರೆ. ಆಫ್ರೀನ್ ಹಾಗೂ ಶೀತಲ್ ಮಧ್ಯೆ ಅಕ್ರಮ ಸಂಬಂಧ ಇತ್ತು ಎಂಬ ಸಂಶಯದಿಂದ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಕರಣ ಸಂಬಂಧ ರಾಘವೇಂದ್ರ ನಗರ ಠಾಣೆ ಪೊಲೀಸರು ಕುಲಸುಮ್ ಬಿ, ಅಮ್ಜದ್ ಮತ್ತು ಮೆಹಬೂಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.