ADVERTISEMENT

ಸಂಗಾಪುರ: ಕೊಲೆ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 2:43 IST
Last Updated 4 ಸೆಪ್ಟೆಂಬರ್ 2020, 2:43 IST
ಅಫಜಲಪುರ ತಾಲ್ಲೂಕಿನ ಸಂಗಾಪುರ (ಕೆಕ್ಕರಸಾವಳಗಿ) ಗ್ರಾಮದಲ್ಲಿ ಬಾಬು ಕೋಬಾಳನನ್ನು ಕೊಲೆ ಮಾಡಿದ ಆರೋಪಿಗಳನ್ನು ದೇವಲ ಗಾಣಗಾಪುರ ಪೊಲೀಸರು ಬಂಧಿಸಿದ್ದಾರೆ
ಅಫಜಲಪುರ ತಾಲ್ಲೂಕಿನ ಸಂಗಾಪುರ (ಕೆಕ್ಕರಸಾವಳಗಿ) ಗ್ರಾಮದಲ್ಲಿ ಬಾಬು ಕೋಬಾಳನನ್ನು ಕೊಲೆ ಮಾಡಿದ ಆರೋಪಿಗಳನ್ನು ದೇವಲ ಗಾಣಗಾಪುರ ಪೊಲೀಸರು ಬಂಧಿಸಿದ್ದಾರೆ   

ಅಫಜಲಪುರ: ತಾಲ್ಲೂಕಿನ ಸಂಗಾಪುರ (ಕೆಕ್ಕರಸಾವಳಗಿ) ಗ್ರಾಮದಲ್ಲಿ ಆಗಸ್ಟ್ 30ರಂದು ಸಂಜೆ ಬಾಬು ಕೋಬಾಳ (26) ಅವರನ್ನು ಕೊಡಲಿಯಿಂದ ರುಂಡ ಹಾರಿಸಿ ಕೊಲೆ ಮಾಡಿದ ಆರೋಪಿಗಳನ್ನು ದೇವಲ ಗಾಣಗಾಪುರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಸಂಗಾಪುರದ (ಕೆಕ್ಕರಸಾವಳಗಿ) ಪ್ರಭು ಲಕ್ಷ್ಮಣ್ ಕಾಂಬಳೆ, ಚಾಂದ್ ಹುಸೇನಸಾಬ್ ಜಮಾದಾರ್ ಹಾಗೂ ಮಹ್ಮದ ಇಸ್ಮಾಯಿಲ್ ಸಾಬ್ ಹುಂಡೇಕರ್ ಬಂಧಿತರು.

ಹಳೆಯ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಪತ್ತೆ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾರ್ಜ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನಕುಮಾರ್ ದೇಸಾಯಿ, ಆಳಂದ ವಿಭಾಗದ ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.