ಕಲಬುರಗಿ: ಅಫಜಲಪುರ ತಾಲ್ಲೂಕಿನ ಮಾಶ್ಯಾಳ ಗ್ರಾಮದಲ್ಲಿ ಬುಧವಾರ ರಾತ್ರಿ ಮೊಬೈಲ್ನಲ್ಲಿ ಆನ್ಲೈನ್ ‘ಲುಡೊ’ ಆಡುವಾಗಜಗಳ ತಾರಕಕ್ಕೇರಿ ಯುವಕನೊಬ್ಬ ಬಾಲಕನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.
ಶಾಮರಾಯ ಪರೀಟ (16) ಕೊಲೆಯಾದ ಬಾಲಕ. ಸಚಿನ್ಕಿರಸಾವಳಗಿ (22) ಕೊಲೆ ಆರೋಪಿಯಾಗಿದ್ದು, ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಲುಡೊ ಆಡುವಾಗ ಶಾಮರಾಯ ಮತ್ತು ಸಚಿನ್ ನಡುವೆ ಜಗಳವಾಗಿದೆ. ಶಾಮರಾಯನ ಸಹೋದರ ಇಬ್ಬರನ್ನೂ ಸಮಾಧಾನಪಡಿಸಿ, ಮನೆಗೆ ಕಳುಹಿಸಿದರು. ಆದರೆ, ಇಷ್ಟಕ್ಕೆ ಸಮಾಧಾನಗೊಳ್ಳದ ಸಚಿನ್ ಚಾಕು ತಂದು ಶಾಮರಾಯನ ಎದೆಗೆ ಇರಿದು ಕೊಲೆ ಮಾಡಿದ. ಶಾಮರಾಯನ ಸಹೋದರ ಧರ್ಮರಾಜ ದೂರು ನೀಡಿದ್ದಾರೆ’ ಎಂದು ಅಫಜಲಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.