ADVERTISEMENT

ಕಮಲಾಪುರ| ಸಿಡಿಲು ಬಡಿದು ಜೋಡೆತ್ತು ಸಾವು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2023, 10:26 IST
Last Updated 27 ಏಪ್ರಿಲ್ 2023, 10:26 IST

ಕಮಲಾಪುರ; (ಕಲಬುರಗಿ ಜಿಲ್ಲೆ): ಸಿಡಿಲು ಬಡಿದು ಜೋಡೆತ್ತು ಮೃತಪಟ್ಟ ಘಟನೆ ತಾಲ್ಲೂಕಿನ ಮಳಸಾಪುರ ತಾಂಡಾದಲ್ಲಿ ಗುರುವಾರ ನಡೆದಿದೆ.

ಈ ಎತ್ತುಗಳು ಮಳಸಾಪುರ ತಾಂಡಾ ನಿವಾಸಿ ನಾತು ಘಮ್ಮು ಚವ್ಹಾಣ್ ಅವರಿಗೆ ಸೇರಿದ್ದು, ಸುಮಾರು ₹ 1.40 ಲಕ್ಷ ಮೌಲ್ಯ ಹೊಂದಿವೆ.

ಗಳೆ ಹೊಡೆದು ಮರದ ನೆರಳಿನ ಅಡಿಯಲ್ಲಿ ಎರಡೂ ಎತ್ತುಗಳನ್ನು ಕಟ್ಟಲಾಗಿತ್ತು. ಮಧ್ಯಾಹ್ನ ಏಕಾಏಕಿ ಗುಡುಗು, ಮಿಂಚು ಸಹಿತ ಮಳೆ ಆರಂಭವಾಯಿತು. ಮರಕ್ಕೆ ಸಿಡಿಲು ಬಡಿದ ಕಾರಣ ಅದರ ಅಡಿಯಲ್ಲಿ ನಿಂತಿದ್ದ ಎರಡು ಎತ್ತುಗಳು ಸ್ಥಳದಲ್ಲಿ ಮೃತಪಟ್ಟಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.