ಚಿಂಚೋಳಿ: ತಾಲ್ಲೂಕಿನ ಮಿರಿಯಾಣ ಬಳಿಯ ಕಲ್ಲುಗಣಿಯಲ್ಲಿ ತೆಲಂಗಾಣ ಪದಪೆದ್ದಮುಲ ಮಂಡಲ ವ್ಯಾಪ್ತಿಯ ಭಾವಿಮುಡಿ ತಾಂಡಾದ ವ್ಯಕ್ತಿಯನ್ನು ಕೊಲೆ ಮಾಡಿದ್ದು, ಸೋಮವಾರ ಶವ ಪತ್ತೆಯಾಗಿದೆ.
‘ತೆಲಂಗಾಣದ ಭಾವಿಮುಡಿ ತಾಂಡಾದ ಭದ್ರು ಥಾವರು ರಾಠೋಡ್ (45) ಕೊಲೆಯಾದವರು. ಮಗಳ ಪ್ರೇಮವಿವಾಹದ ವಿಚಾರವಾಗಿ ಪತಿ– ಪತ್ನಿ ಮಧ್ಯೆ ನಡೆಯುತ್ತಿದ್ದ ಕಲಹವೇ ಕಾರಣವಿರಬಹುದು ಎಂಬುದು ಮೇಲ್ನೋಟಕ್ಕೆ ತಿಳಿದಿದೆ’ ಎಂದುಡಿವೈಎಸ್ಪಿ ಬಸವರಾಜ ಹೀರಾ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಮಹಾಂತೇಶ ಪಾಟೀಲ ಮಾಹಿತಿ ನೀಡಿದ್ದಾರೆ. ಮಿರಿಯಾಣ ಠಾಣೆಯ ಸಬ್ಇನ್ಸ್ಪೆಕ್ಟರ್ ಇಂದುಮತಿ ಪ್ರಕರಣ ಬೇಧಿಸಿದ್ದು, ಆರೋಪಿಗಳ ವಿಚಾರಣೆ ನಡೆಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.