ADVERTISEMENT

ಹಿಂದುಳಿದ ವರ್ಗ ಸಮಾವೇಶಕ್ಕೆ 25 ಸಾವಿರ ಜನ: ಪ್ರಮೋದ್ ಮದ್ವರಾಜ್

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2022, 4:01 IST
Last Updated 26 ಅಕ್ಟೋಬರ್ 2022, 4:01 IST
ಪ್ರಮೋದ್ ಮದ್ವರಾಜ್
ಪ್ರಮೋದ್ ಮದ್ವರಾಜ್   

ಸೇಡಂ: ‘ಕಲಬುರಗಿಯಲ್ಲಿ ಅಕ್ಟೋಬರ್‌ 30 ರಂದು ನಡೆಯಲಿರುವ ಹಿಂದುಳಿದ ವರ್ಗಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಸೇಡಂ ಬಿಜೆಪಿ ಮಂಡಲದಿಂದ ಸುಮಾರು 25 ಸಾವಿರಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ’ ಎಂದು ಮಾಜಿ ಸಚಿವ ಪ್ರಮೋದ್ ಮದ್ವರಾಜ್ ತಿಳಿಸಿದರು.

‘ಸಮಾವೇಶ ಯಶಸ್ವಿಯಾಗಿಸಲು ಜಿಲ್ಲೆಯ ಚಿಂಚೋಳಿ ತಾಲ್ಲೂಕಿಗೆ ಈಗಾಗಲೇ ಪ್ರವಾಸ ಬೆಳೆಸಿ ಶಕ್ತಿ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಸೇಡಂ ವಿಧಾನಸಭಾ ಕ್ಷೇತ್ರದ ಮಳಖೇಡ, ಶಿರೋಳ್ಳಿ, ಆಡಕಿ, ಮುಧೋಳ, ರಂಜೋಳ, ದುಗನೂರು ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಜನರ ಜತ ಚರ್ಚಿಸಿದ್ದೇನೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಿಜೆಪಿ ಮುಖಂಡ ಶರಣಪ್ಪ ತಳವಾರ ಮಾತನಾಡಿ, ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದುಳಿದ ವರ್ಗದ ಜನರು ಅಧಿಕವಾಗಿರುವುದರಿಂದ ಸಮಾವೇಶ ಈ ಭಾಗದಲ್ಲಿ ನಡೆಯುತ್ತಿದ್ದು, ಯಶಸ್ವಿಗೆ ಸುಮಾರು 41 ಸಮಿತಿಗಳನ್ನು ರಚಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಪ್ಪ ಕೊಳ್ಳಿ, ತಾಲ್ಲೂಕು ಘಟಕದ ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ, ಕಾರ್ಯದರ್ಶಿ ಓಂ ಪ್ರಕಾಶ ಪಾಟೀಲ, ರವಿಕುಮಾರ ಭಂಟನಳ್ಳಿ, ವೆಂಕಟಯ್ಯ ಮುಸ್ತಾಜರ್, ರಾಘವೇಂದ್ರ ಮೆಕ್ಯಾನಿಕ್, ಸತೀಶ ಪಾಟೀಲ, ಭೀಮರಾಯ ಹಣಮನಳ್ಳಿ, ಜಗದೀಶ ತಳವಾರ, ಕಮಲ್ ಜಾಧವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.