ಚಿಂಚೋಳಿ: ತಾಲ್ಲೂಕಿನ ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಉತ್ತಮ ಮಳೆಯಾಗಿದೆ. ವೆಂಕಟಾಪುರದಲ್ಲಿ 40 ನಿಮಿಷಕ್ಕೂ ಹೆಚ್ಚು ಕಾಲ ಮಳೆ ಸುರಿದಿದೆ ಎಂದು ಸಾಮಾಜಿಕ ಕಾರ್ಯಕರ್ತ ಗೋಪಾಲ ಭಜಂತ್ರಿ ತಿಳಿಸಿದ್ದಾರೆ.
ಧರ್ಮಾಸಾಗರದಲ್ಲಿ 25 ನಿಮಿಷ ಹಾಗೂ ಬೋನಸಪುರದಲ್ಲಿ 45 ನಿಮಿಷ ಹಾಗೂ ಪೆದ್ದಾ ತಾಂಡಾ ಮತ್ತು ಒಂಟಿಚಿಂತಾ, ಒಂಟಿಗುಡ್ಸಿ, ಸಂಗಾಪುರ, ಗೋಪು ನಾಯಕ ತಾಂಡಾ ಮೊದಲಾದ ಕಡೆ ಸಾಧರಣದಿಂದ ಕೂಡಿದ ಮಳೆ ಸುರಿದಿದೆ. ಆದರೆ ಕುಂಚಾವರಂ ಶಾದಿಪುರದಲ್ಲಿ ಮಳೆಯಾಗಿಲ್ಲ.
ವೆಂಕಟಾಪುರದಲ್ಲಿ ಬೇಸಿಗೆಯಲ್ಲಿ ಎರಡು ಮಳೆ ಚೆನ್ನಾಗಿ ಸುರಿದಿದೆ. ಇನ್ನೊಂದು ಬಿರುಸು ಮಳೆಯಾದರೆ ಮುಂಗಾರು ಬಿತ್ತನೆ ಆರಂಭಿಸುವ ಸಾಧ್ಯತೆ ಅಧಿಕವಾಗಿದೆ. ಮಳೆಯಿಂದ ರಸ್ತೆಯ ಮೇಲೆ ನೀರು ಹರಿದಿದೆ. ಹೊಲಗಳಲ್ಲಿ ತಗ್ಗು ಪ್ರದೇಶ ಹಾಗೂ ರಸ್ತೆಯ ತಗ್ಗುಗುಂಡಿಗಳಲ್ಲಿ ನೀರು ಸಂಗ್ರಹವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.