ಕಲಬುರ್ಗಿ: ವಿಭಾಗದ ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ನಿಯೋಜನೆ ಮೇರೆಗೆ ಎಲ್ಲ ಕಚೇರಿಗಳಲ್ಲಿರುವ ಗ್ರಾಮಲೆಕ್ಕಿಗರನ್ನು ಲಿಪಿಕ ಸೇವೆಯಿಂದ ಬಿಡುಗಡೆಗೊಳಿಸಿ, ಅವರು ಕ್ಷೇತ್ರವ್ಯಾಪ್ತಿಯಡಿ ಕಾರ್ಯನಿರ್ವಹಿಸುವಂತೆ ಕ್ರಮ ಜರುಗಿಸಬೇಕೆಂದು ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್ ತಿಳಿಸಿದ್ದಾರೆ.
ಒಂದು ವೇಳೆ ಈ ಆದೇಶಗಳನ್ನು ಉಲ್ಲಂಘಿಸಿದ್ದಲ್ಲಿ ಸಂಬಂಧಪಟ್ಟವರನ್ನು ಅಧಿಕಾರಿಗಳನ್ಣೇ ಜವಾಬ್ದಾರಿಯನ್ನಾಗಿ ಮಾಡಿ ಕ್ರಮ ಜರುಗಿಸಲಾಗುವುದು. ಗ್ರಾಮ ಲೆಕ್ಕಿಗರು ಕಡ್ಡಾಯವಾಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕುರಿತು ಸರ್ಕಾರದ ನಿರ್ದೇಶನಗಳಿದ್ದು, ಅವರ ಸೇವೆಯೂ ಕ್ಷೇತ್ರದಲ್ಲಿ ಅವಶ್ಯವಿದ್ದರೂ, ಗ್ರಾಮಲೆಕ್ಕಿಗರಿಗೆ ಲಿಪಿಕ ಕೆಲಸಗಳಿಗೆ ನಿಯೋಜಿಸಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕ ಆಡಳಿತ ಮತ್ತು ಭೂಕಂದಾಯ ಕಾಯ್ದೆಯಡಿ ಗೊತ್ತುಪಡಿಸಿರುವಂತೆ ಕ್ಷೇತ್ರ ಸೇವೆಗಳನ್ನು ನಿರ್ವಹಿಸುವ ದೃಷ್ಟಿಯಿಂದ ಸಂದರ್ಭನುಸಾರ ನಿಯೋಜನೆ ಮೇರೆಗೆ ತೈನಾತಿಕೊಂಡಿರುವ ಎಲ್ಲಾ ಕಚೇರಿಗಳಲ್ಲಿನ ಗ್ರಾಮಲೆಕ್ಕಿಗರನ್ನು ಲಿಪಿಕ ಸೇವೆಯಿಂದ ಬಿಡುಗಡೆಗೊಳಿಸಿ, ಅವರಿಗೆ ಸ್ಥಳ ನಿಯುಕ್ತಿಗೊಳಿಸಿ ಕ್ಷೇತ್ರವ್ಯಾಪ್ತಿಯಡಿ ಕಾರ್ಯನಿರ್ವಹಿಸುವಂತೆ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.