ADVERTISEMENT

ಕಾರಿಗೆ ಬೈಕ್‌ ಡಿಕ್ಕಿ: ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 21:37 IST
Last Updated 17 ಡಿಸೆಂಬರ್ 2020, 21:37 IST
ಶರಣು ದೇವಿಂದ್ರಪ್ಪ ತಂಗಾ
ಶರಣು ದೇವಿಂದ್ರಪ್ಪ ತಂಗಾ   

ಕಮಲಾಪುರ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಅಂತಪನಾಳ ಬಳಿ ಕಾರಿಗೆ ಬೈಕ್‌ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.

ಕಲ್ಮೂಡ ಗ್ರಾಮದ 9ನೇ ತರಗತಿ ವಿದ್ಯಾರ್ಥಿ ರಚಿತ ರವೀಂದ್ರ ಬುಕ್ಕನ್ (15) ಹಾಗೂ ಶರಣು ದೇವಿಂದ್ರಪ್ಪ ತಂಗಾ (23)
ಮೃತ ಯುವಕರು. ಕಮಲಾಪುರಕ್ಕೆ ಅಡುಗೆ ಅನಿಲ ತರಲು ತೆರಳಿದ್ದ ಇವರು ಕಲಮೂಡ ಗ್ರಾಮಕ್ಕೆ ಮರಳುತ್ತಿದ್ದರು. ಕಲಮೂಡನಿಂದ ಕಮಲಾಪುರ ತೆರಳುತ್ತಿದ್ದ ವೇಳೆ ಬೈಕ್–ಕಾರು ಮಧ್ಯೆ ಡಿಕ್ಕಿ ಸಂಭವಿಸಿದೆ.

ತೀವ್ರವಾಗಿ ಗಾಯಗೊಂಡ ಇವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.