ADVERTISEMENT

‘ಅಪೂರ್ಣ ಯೋಜನೆ ಪೂರ್ಣಗೊಳಿಸಿ’

​ಪ್ರಜಾವಾಣಿ ವಾರ್ತೆ
Published 23 ಮೇ 2023, 14:49 IST
Last Updated 23 ಮೇ 2023, 14:49 IST

ಚಿಂಚೋಳಿ: ತಾಲ್ಲೂಕಿಗೆ ಮಂಜೂರಾಗಿರುವ ವಿವಿಧ ಯೋಜನೆ ಪೂರ್ಣಗೊಳಿಸಲು ಶಾಸಕರು ಶ್ರಮವಹಿಸಬೇಕು ಎಂದು ರಮೇಶ ಯಾಕಾಪುರ ತಿಳಿಸಿದ್ದಾರೆ.

ಎರಡನೇ ಬಾರಿಗೆ ಶಾಸಕರಾಗಿ ಪುನರಾಯ್ಕೆಯಾದ ಶಾಸಕ ಡಾ.ಅವಿನಾಶ ಜಾಧವ ಅವರು, ಐನಾಪುರ ಏತ ನೀರಾವರಿ ಯೋಜನೆ, ಕೆಳದಂಡೆ ಮುಲ್ಲಾಮಾರಿ ಯೋಜನೆ ಪೂರ್ಣಗೊಳಿಸಬೇಕು, ಚಿಂಚೋಳಿಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮಂಜೂರು, ಡಿಪ್ಲೊಮಾ, ವೈದ್ಯಕೀಯ ಕೋರ್ಸ್‌ ಆರಂಭಿಸಬೇಕು, ಶಾಸಕರು ಕೈಗೊಳ್ಳುವ ಜನಪರ ಕೆಲಸ ಕಾರ್ಯಗಳಿಗೆ ಮತ್ತು ಕ್ಷೇತ್ರದ ಜನರ ಅಭಿವೃದ್ಧಿಗೆ ತಮ್ಮ ಸಹಕಾರ ಇರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT