ADVERTISEMENT

ಕಲಬುರಗಿ: ಹ್ಯಾಂಡ್‌ಬಾಲ್‌ ಟೂರ್ನಿಗೆ ಮೂವರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2025, 16:16 IST
Last Updated 17 ಫೆಬ್ರುವರಿ 2025, 16:16 IST
ಅಮೋಘಸಿದ್ಧ
ಅಮೋಘಸಿದ್ಧ   

ಕಲಬುರಗಿ: ಇಲ್ಲಿನ ಕರ್ನಾಟಕ ಪೀಪಲ್‌ ಎಜುಕೇಶನ್ ಸೊಸೈಟಿಯ ಬಿ.ಶ್ಯಾಮಸುಂದರ ಸ್ಮಾರಕ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳಾದ ಅಮೋಘಸಿದ್ಧ ಭೀಮರಾಯ ವಿಜಯಪುರ, ಮಯೂರ ಅನಿಲ್‌, ಶಿವರಾಯ ಎಂ. ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಹ್ಯಾಂಡ್‌ಬಾಲ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ.

ತಮಿಳುನಾಡಿನ ಸೇಲಂನ ಪೆರಿಯಾರ್‌ ವಿಶ್ವವಿದ್ಯಾಲಯದಲ್ಲಿ ಫೆ.28ರಿಂದ ಮಾರ್ಚ್‌ 4ರವರೆಗೆ ನಡೆಯಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಹ್ಯಾಂಡ್‌ಬಾಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT