ಚಿಂಚೋಳಿ: ತಾಲ್ಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಹಾವು ಕಚ್ಚಿ ಹಸು ಸತ್ತಿದೆ.
ಸತ್ತ ಹಸು ಶಿವರಾಯ ಸಾಯಬಣ್ಣ ಚಂದಿ ಅವರಿಗೆ ಸೇರಿದ್ದು. ತಿಂಗಳ ಹಿಂದೆ ₹ 50 ಸಾವಿರಕ್ಕೆ ಇದನ್ನು ಖರೀದಿಸಿದ್ದಾಗಿ ರೈತ ಹೇಳಿದ್ದಾರೆ. ಊರಿನ ಹತ್ತಿರದ ಹೊಲದ ಬದುವಿನಲ್ಲಿ ಮೇಯಲು ಕಟ್ಟಿದಾಗ ಹಸುವಿಗೆ ಹಾವು ಕಚ್ಚಿದೆ. ಈ ಹಸುವಿಗೆ 25 ದಿನಗಳ ಕರು ಕೂಡ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.