ADVERTISEMENT

ಸೇಡಂ: ಕೀಟನಾಶಕ ಸಿಂಪಡಿಸಿದ್ದ ಕೈಯಲ್ಲೇ ಊಟ ಸೇವಿಸಿ ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 13:30 IST
Last Updated 29 ಜನವರಿ 2021, 13:30 IST
ಮೃತ ಬಾಲಕ ಅರುಣ ‌ನರೇಶ ತಲಾರಿ
ಮೃತ ಬಾಲಕ ಅರುಣ ‌ನರೇಶ ತಲಾರಿ   

ಸೇಡಂ: ಕಡಲೆ ಬೆಳೆಗೆ ಕೀಟನಾಶಕ ಸಿಂಪಡಿಸಿ, ಕೈ ತೊಳೆಯದೆ ಹಾಗೆ ಊಟ ಮಾಡಿದ ಪರಿಣಾಮ ತಾಲ್ಲೂಕಿನ ಖಂಡೇರಾಯನಪಲ್ಲಿ ಗ್ರಾಮದ ಅರುಣ ‌ನರೇಶ ತಲಾರಿ (18) ಎಂಬ ಯುವಕ ಗುರುವಾರ ತಡರಾತ್ರಿ ಮೃತಪಟ್ಟಿದ್ದಾನೆ.

ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ. ಅನೇಕ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಇದಕ್ಕಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದ.

ಗುರುವಾರ ಕಡಲೆ ಬೆಳೆಗೆ ಕೀಟನಾಶಕ ಸಿಂಪಡಿಸಿ, ಕೈ ತೊಳೆಯದೆ ಮನೆಗೆ ಬಂದು ಊಟ ಮಾಡಿದಾಗ ಕೀಟನಾಶಕದ ಅಂಶ ಹೊಟ್ಟೆ ಸೇರಿ ಸಾವನ್ನಪ್ಪಿದ್ದಾನೆ.

ADVERTISEMENT

ಈ ಕುರಿತು ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.