ಕಲಬುರಗಿ: ’ಯುಗಾದಿ‘ ಹಬ್ಬದ ಅಂಗವಾಗಿ ಪ್ರಜಾವಾಣಿ ಬಳಗದ ‘ಸುಧಾ’ ವಾರ ಪತ್ರಿಕೆಯು ಹೊರತಂದ 2022ನೇ ಸಾಲಿನ ವಿಶೇಷಾಂಕವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಶನಿವಾರ ಬಿಡುಗಡೆ ಮಾಡಿದರು.
ವಿಶೇಷಾಂಕದ ಪುಟಗಳನ್ನು ತಿರುವಿ ಹಾಕಿದ ಇಶಾ ಪಂತ್, ‘ಹಸಿರು ಕರ್ನಾಟಕ’ ಪರಿಕಲ್ಪನೆಯನ್ನು ಇಟ್ಟುಕೊಂಡು ಈ ಬಾರಿಯ ವಿಶೇಷಾಂಕ ಹೊರತಂದಿರುವುದು ಶ್ಲಾಘನೀಯ. ಬಿಸಿಲಿನ ತಾಪವನ್ನು ಕಡಿಮೆ ಮಾಡಬೇಕೆಂದರೆ ಗಿಡ, ಮರಗಳನ್ನು ಹೆಚ್ಚಾಗಿ ಬೆಳೆಸಬೇಕು. ಈ ರೂಢಿಯನ್ನು ಶಾಲಾ ಹಂತದಿಂದಲೇ ಮಕ್ಕಳಲ್ಲಿ ಮೂಡಿಸಬೇಕು’ ಎಂದರು.
ವಿಶೇಷಾಂಕದಲ್ಲಿ ಏನಿದೆ? ಈ ಬಾರಿಯ ವಿಶೇಷಾಂಕದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಸಿರು ಬೆಳೆಸಲು ಮುಂದಾದ ಸಾಧಕರ ಬಗ್ಗೆ ವಿವರಗಳಿವೆ. ಬೀದರ್ ಜಿಲ್ಲೆಯಲ್ಲಿನ ಭಾವೈಕ್ಯದ ಕುರುಹಾಗಿ ಇರುವ ಕೋಟೆಗಳು, ಮಸೀದಿಗಳು, ಗುರುದ್ವಾರ ಹಾಗೂ ಈ ಧಾರ್ಮಿಕ, ಐತಿಹಾಸಿಕ ಸ್ಮಾರಕಗಳೊಂದಿಗೆ ಇಲ್ಲಿನ ಜನರು ಹೊಂದಿರುವ ಭಾವನಾತ್ಮಕ ಸಂಬಂಧಗಳನ್ನು ವಿವರಿಸುವ ಲೇಖನ, ಪ್ರಬಂಧ, ಕಾವ್ಯ ಸ್ಪರ್ಧೆಯಲ್ಲಿ ಪ್ರಕಟವಾದ ಪ್ರಬಂಧಗಳು ಹಾಗೂ ಕವನಗಳು, ಲಲಿತ ಪ್ರಬಂಧ, ಪ್ರವಾಸ ಕಥನ ಸೇರಿದಂತೆ ಸಾಹಿತ್ಯದ ಹೂರಣವೇ ಇದೆ.
ವಿಶೇಷಾಂಕವು ಮಾರುಕಟ್ಟೆಯಲ್ಲಿ ಲಭ್ಯವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.