ADVERTISEMENT

ಭೂಮಿಯಿಂದ ಸದ್ದು: ಭೂಕಂಪನ ದೃಢಪಟ್ಟಿಲ್ಲ ಎಂದ ತಹಶೀಲ್ದಾರ್ ಅಂಜುಮ್ ತಬಸ್ಸುಮ್

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 11:30 IST
Last Updated 1 ಸೆಪ್ಟೆಂಬರ್ 2022, 11:30 IST
ಚಿಂಚೋಳಿ ತಹಶೀಲ್ದಾರ್ ಅಂಜುಮ್ ತಬಸ್ಸುಮ್ ಲಘು‌ಕಂಪನ‌ ಪೀಡಿತ ಗ್ರಾಮಗಳಿಗೆ ಗುರುವಾರ ಭೇಟಿ‌ ನೀಡಿ ಜನರಿಂದ ಮಾಹಿತಿ ಪಡೆದರು
ಚಿಂಚೋಳಿ ತಹಶೀಲ್ದಾರ್ ಅಂಜುಮ್ ತಬಸ್ಸುಮ್ ಲಘು‌ಕಂಪನ‌ ಪೀಡಿತ ಗ್ರಾಮಗಳಿಗೆ ಗುರುವಾರ ಭೇಟಿ‌ ನೀಡಿ ಜನರಿಂದ ಮಾಹಿತಿ ಪಡೆದರು   

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ವಿವಿಧೆಡೆ ಬುಧವಾರ ತಡರಾತ್ರಿ ಭೂಮಿಯಿಂದ ಸದ್ದು ಬಂದಿದೆ. ಆದರೆ ಭೂಕಂಪನ‌ ಮಾಪನ ಕೇಂದ್ರಗಳಲ್ಲಿ ಇದು ದೃಢಪಟ್ಟಿಲ್ಲ ಎಂದು ತಹಶೀಲ್ದಾರ್ ಅಂಜುಮ್ ತಬಸ್ಸುಮ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬುಧವಾರ ತಡರಾತ್ರಿ ಚಿಮ್ಮಾಈದಲಾಯಿ, ದಸ್ತಾಪುರ, ಐಪಿ ಹೊಸಳ್ಳಿ, ನೀಮಾ ಹೊಸಳ್ಳಿ, ಅಣವಾರ, ಗೌಡನಹಳ್ಳಿ, ಸುಲೇಪೇಟ ಮೊದಲಾದ ಕಡೆ ಭೂಮಿಯಿಂದ ಸದ್ದು ಬಂದಿದೆ ಎಂದು ಜನ ತಿಳಿಸಿದ್ದರು.‌ ಈ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಭೂವೈಜ್ಞಾನಿಕ ಸಂಶೋಧನಾ ಸಂಸ್ಥೆಯ ಭೂಕಂಪ ತಜ್ಞರನ್ನು ಸಂಪರ್ಕಿಸಿದ್ದೇವೆ, ಭೂಕಂಪದ ಯಾವುದೇ ದತ್ತಾಂಶ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ ಎಂದರು.

ಶರಣಸಿರಸಗಿಯ ಭೂಕಂಪನ‌ ಮಾಪನ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ ಮೇಲೆ ಅವರು ದತ್ತಾಂಶ ಪರಿಶೀಲಿಸಿದ್ದು ಯಾವುದೇ ಭೂಕಂಪನ ಅಥವಾ ಲಘುಕಂಪನ ದಾಖಲಾಗಿಲ್ಲ ಎಂದರು.

ADVERTISEMENT

‘ಜನರು ವಿನಾಕಾರಣ ಗಾಬರಿಗೊಳ್ಳಬಾರದು. ಸರ್ಕಾರ, ವಿಜ್ಞಾನಿಗಳು ನಿಮ್ಮ ಜತೆಗಿದ್ದಾರೆ’ ಎಂದು ಅಭಯ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.