ADVERTISEMENT

ಶಿಕ್ಷಕ ವೃತ್ತಿ ಉದಾತ್ತ ಸೇವೆ: ನಿರಂಜನ ನಿಷ್ಠಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2018, 15:40 IST
Last Updated 5 ಸೆಪ್ಟೆಂಬರ್ 2018, 15:40 IST
ಡಾ. ನಿರಂಜನ ನಿಷ್ಠಿ
ಡಾ. ನಿರಂಜನ ನಿಷ್ಠಿ   

ಕಲಬುರ್ಗಿ: ‘ಶಿಕ್ಷಕ ವೃತ್ತಿ ಉದಾತ್ತ ಸೇವೆಯಾಗಿದೆ. ಪ್ರತಿಯೊಬ್ಬರೂ ಕಠಿಣ ಪರಿಶ್ರಮ, ಶ್ರದ್ಧೆ ಮತ್ತು ನಮ್ರತೆಯನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ನಿಷ್ಠಿ ಹೇಳಿದರು.

ಆಳಂದ ತಾಲ್ಲೂಕು ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಪ್ರತಿಯೊಂದು ಕಾರ್ಯವೂ ಉದಾತ್ತ ಕಾರ್ಯವಾಗಿದೆ. ಆದರೆ, ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದರ ಮೇಲೆ ಅದರ ಘನತೆ ಮತ್ತು ಗೌರವ ಅಡಗಿದೆ’ ಎಂದರು.

ADVERTISEMENT

‘18ನೇ ಶತಮಾನದಲ್ಲಿ ಉಂಟಾದ ಕೈಗಾರಿಕಾ ಕ್ರಾಂತಿಯು ಜಗತ್ತಿನ ಶೈಕ್ಷಣಿಕ ವ್ಯವಸ್ಥೆ ಮತ್ತು ಶಿಕ್ಷಕನ ಪಾತ್ರವನ್ನು ಬದಲಿಸಿತು. ವಿದ್ಯಾರ್ಥಿಗಳನ್ನು ಚಿಂತಕರನ್ನಾಗಿ ಮಾಡುವ ಬದಲು ಹೇಳಿದ್ದನ್ನು ಮಾಡುವಂತಹ ವ್ಯಕ್ತಿಗಳನ್ನಾಗಿ ರೂಪಿಸಿತು. ಹೀಗಾಗಿ ಇಂದಿನ ಶಿಕ್ಷಕರು ವಿದ್ಯಾರ್ಥಿಗಳನ್ನು ಚಿಂತಕರನ್ನಾಗಿ ಮಾಡಲು ಮುಂದಾಗಬೇಕು’ ಎಂದು ಹೇಳಿದರು.

ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ ಮಾತನಾಡಿ, ‘ಶಿಕ್ಷಕ ವೃತ್ತಿಯು ಬೇರೆಲ್ಲ ವೃತ್ತಿಗಳಿಗಿಂತಲೂ ಶ್ರೇಷ್ಠವಾಗಿದೆ. ಶಿಕ್ಷಕರಾದವರು ಶ್ರದ್ಧೆ ಮತ್ತು ಪ್ರಾಮಣಿಕತೆಯಿಂದ ಕಾರ್ಯ ನಿರ್ವವಹಿಸಬೇಕು’ ಎಂದು ಸಲಹೆ ನೀಡಿದರು.

ಸಮ ಕುಲಪತಿ ಪ್ರೊ.ಜಿ.ಆರ್.ನಾಯಕ್, ಕುಲಸಚಿವ ಪ್ರೊ.ಎಂ.ವಿ.ಅಳಗವಾಡಿ, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಎಂ.ಎ.ಅಸ್ಲಾಮ್ ಮಾತನಾಡಿದರು.

ಅಜೀಮ್ ಪಾಷಾ, ಡಾ. ಗಣಪತಿ ಬಿ.ಸಿನ್ನೂರ್, ಡಾ. ಅಪ್ಪಗೆರೆ ಸೋಮಶೇಖರ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.