ಕಲಬುರ್ಗಿ: ಇಲ್ಲಿಯ ಬ್ರಹ್ಮಪುರ ಎನ್.ಆರ್. ಕಾಲೊನಿಯಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶ್ವ ಮಧ್ವಮಹಾ ಪರಿಷತ್, ಶ್ರೀನಿವಾಸ ಜ್ಞಾನವಾಹಿನಿ, ಸತ್ಯಾನಂದ ಭಜನಾ ಮಂಡಳಿ ಆಶ್ರಯದಲ್ಲಿ ವೈಕುಂಠ ಏಕಾದಶಿ ಕಾರ್ಯಕ್ರಮ ಮಂಗಳವಾರ ಜರುಗಿತು.
ಅಧ್ಯಕ್ಷ ನಾರಾಯಣರಾವ ಕುಲಕರ್ಣಿ, ಉಪಾಧ್ಯಕ್ಷ ಶ್ರೀನಿವಾಸ ಕುಲಕರ್ಣಿ, ಪಿ.ಎನ್.ಜೋಶಿ, ಸದಸ್ಯರಾದ ವಿಠಲರಾವ ಮೋರೆ, ಗೋವರ್ಧನ್ ದೇಶಪಾಂಡೆ, ರಮೇಶ ಬಾಬು, ಮಾಣಿಕರಾವ ಶಿಂಧೆ, ಮೋಹನರಾವ ಜೋಶಿ, ರಾಘವೇಂದ್ರ ದೇಸಾಯಿ, ಸೂರ್ಯಕಾಂತ ಝಳಕಿ, ಸುಹಾಸ್ ಕುಲಕರ್ಣಿ ಇದ್ದರು.
ನಂತರ ಮಹಿಳಾ ಮಂಡಳ ವತಿಯಿಂದ ಭಜನೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.