ಅಫಜಲಪುರ: ತಾಲ್ಲೂಕಿನ ಮಣ್ಣೂರ ಗ್ರಾಮದಲ್ಲಿ ನ.18 ರಿಂದ 20ರವರೆಗೆ ಉತ್ತರಾದಿ ಮಠಾಧೀಶರಾದ ವೇದೇಶತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವವು ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶದಂತೆ ಜರುಗಲಿದೆ.
ಈ ಕುರಿತು ಗುರುವಾರ ವೇದೇಶತೀರ್ಥ ಟ್ರಸ್ಟ್ ಕಮಿಟಿಯವರು ಮಾಹಿತಿ ನೀಡಿ ನ. 18 ರಂದು ಪೂರ್ವಾರಾಧನೆ, ನ.19 ರಂದು ಮದ್ಯಾರಾಧನೆ, ನ.20 ರಂದು ಉತ್ತರಾರಾಧನೆ ಜರುಗಲಿದೆ.
20 ರಂದು ಬೆಳಿಗ್ಗೆ 6 ಗಂಟೆಗೆ ಸುಪ್ರಭಾತ, 11 ಗಂಟೆಗೆ ಗ್ರಾಮದ ಪಾಂಡುರಂಗ ದೇವಸ್ಥಾನದಿಂದ ಗಜವಾಹನೋತ್ಸವ ವಿದ್ಯಾಪೀಠದವರೆಗೆ ಜರುಗುವುದು. ಭಜನಾ ಮಂಡಳಿಗಳಿಂದ ಭಜನೆ, ಪಲ್ಲಕ್ಕಿ ಉತ್ಸವ ನಂತರ ಗುರುಗಳಿಗೆ ಮಹಾ ಪಂಚಾಮೃತ ಅಭಿಷೇಕ, ಅಲಂಕಾರ ಹಸ್ತೋದಕ, ತೀರ್ಥ ಪ್ರಸಾದ, ಸಾಯಂಕಾಲ ಭಜನೆ, ಪಲ್ಲಕ್ಕಿ ಉತ್ಸವ, ಸ್ವಸ್ತಿ ವಾಚನ, ಕಾರ್ತಿಕ ಮಾಸದ ನಿಮಿತ್ತ ದೀಪೋತ್ಸವ, ವಿದ್ವಾಂಸರಿಂದ ಉಪನ್ಯಾಸ ಮಹಾಮಂಗಳಾರತಿ ಕಾರ್ಯಕ್ರಮ ಜರುಗುವುದು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೂರು ದಿನಗಳವರೆಗೆ ನಡೆಯುವ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ವೇದೇಶತೀರ್ಥ ಟ್ರಸ್ಟ್ ಕಮಿಟಿಯವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.