ADVERTISEMENT

ವಿಠಲ ಹೇರೂರ ಪುಣ್ಯಸ್ಮರಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 11:18 IST
Last Updated 3 ಡಿಸೆಂಬರ್ 2021, 11:18 IST
ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಶುಕ್ರವಾರ ದಿ.ವಿಠಲ್ ಹೇರೂರ ಅವರ 8ನೇ ಪುಣ್ಯಸ್ಮರಣೆ ನಿಮಿತ್ತ ಭಾವಚಿತ್ರದ ಮೆರವಣಿಗೆ ಮಾಡಲಾಯಿತು
ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಶುಕ್ರವಾರ ದಿ.ವಿಠಲ್ ಹೇರೂರ ಅವರ 8ನೇ ಪುಣ್ಯಸ್ಮರಣೆ ನಿಮಿತ್ತ ಭಾವಚಿತ್ರದ ಮೆರವಣಿಗೆ ಮಾಡಲಾಯಿತು   

ಚಿತ್ತಾಪುರ: ‘ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರಾಗಿ ಬೆಳೆದ ದಿ.ವಿಠಲ್ ಹೇರೂರ ಅವರು ಕೋಲಿ ಸಮಾಜಕ್ಕಾಗಿ ರಾಜಿರಹಿತ ಹೋರಾಟ ಮಾಡಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮುನಿಯಪ್ಪ ಕೊಳ್ಳಿ ಹೇಳಿದರು.

ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಶುಕ್ರವಾರ ದಿ.ವಿಠಲ ಹೇರೂರ ಅವರ 8ನೇ ಪುಣ್ಯಸ್ಮರಣೆ ನಿಮಿತ್ತ ಭಾವಚಿತ್ರದ ಮೆರವಣಿಗೆ, ಪುಷ್ಪನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೇರೂರ ಅವರು ಮಾಡಿರುವ ಹೋರಾಟ ಸಮಾಜಕ್ಕೆ ದಾರಿದೀಪವಾಗಿದೆ. ಅವರು ತೋರಿದ ಮಾರ್ಗದಲ್ಲಿ ಸಮಾಜದ ಜನರು ಹೋರಾಟ ಮಾಡಬೇಕು ಎಂದು ಅವರು ಹೇಳಿದರು.

ADVERTISEMENT

ಕೋಲಿ ಸಮಾಜದ ಯುವ ಮುಖಂಡ ಸಾಬಣ್ಣ ಭರಾಟೆ ಅವರು ಮಾತನಾಡಿ, ಸಮಾಜವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವರೇ ಹೆಚ್ಚು. ಆದರೆ, ಹೇರೂರ ಅವರು ತಮ್ಮ ಅಧಿಕಾರ ಮತ್ತು ರಾಜಕಾರಣ ಬಳಸಿಕೊಂಡು ಸಮಾಜಕ್ಕೆ ನ್ಯಾಯ ಕೊಡಿಸಲು ಜೀವ ಇರುವವರೆಗೂ ಹೋರಾಟ ನಡೆಸಿದರು. ಅವರ ಹೋರಾಟವೇ ಸಮಾಜಕ್ಕೆ ಬಹುದೊಡ್ಡ ಮಾರ್ಗದರ್ಶನ ಎಂದು ಹೇಳಿದರು.

ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯನವರ ಧ್ವಜಕಟ್ಟೆಯಿಂದ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದವರೆಗೆ ದಿ.ವಿಠಲ ಹೇರೂರ ಅವರ ಭಾವಚಿತ್ರವನ್ನು ಜಯಘೋಷದೊಂದಿಗೆ ಮೆರವಣಿಗೆ ಮಾಡಿ ಪುಷ್ಪನಮನ ಸಲ್ಲಿಸಲಾಯಿತು.

ಮಲ್ಲಿಕಾರ್ಜುನ ಭರಾಟೆ, ಸಂತೋಷ ಕೊಂಕನಳ್ಳಿ, ರವಿ ಕೊಂಕನಳ್ಳಿ, ಮಲ್ಲಿಕಾರ್ಜುನ ಚಿತ್ತಾಪುರ, ಈರಣ್ಣ ಕೊಳ್ಳಿ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.