ADVERTISEMENT

ವಾಡಿ: ನದಿಗೆ ಹಾರಿದ್ದ ವೃದ್ಧೆಯ ರಕ್ಷಿಸಿದ ಯುವಕ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 16:14 IST
Last Updated 24 ಫೆಬ್ರುವರಿ 2021, 16:14 IST
ಕಾಗಿಣಾ ನದಿಯ ಶಂಕರವಾಡಿ ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯನ್ನು ರಕ್ಷಿಸಿದ ಯುವಕ
ಕಾಗಿಣಾ ನದಿಯ ಶಂಕರವಾಡಿ ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯನ್ನು ರಕ್ಷಿಸಿದ ಯುವಕ   

ವಾಡಿ (ಕಲಬುರ್ಗಿ): ಕಾಗಿಣಾ ನದಿಯ ಶಂಕರವಾಡಿ ಸೇತುವೆ ಮೇಲೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯನ್ನು ಯುವಕನೊಬ್ಬ ತನ್ನ ಸಮಯ ಪ್ರಜ್ಞೆಯಿಂದ ಬುಧವಾರ ಕಾಪಾಡಿದ್ದಾನೆ.

ಕಾಗಿಣಾ ನದಿಗೆ ಅಡ್ಡಲಾಗಿ ರಾಷ್ಟ್ರೀಯ ಹೆದ್ದಾರಿ 150ರ ಮೇಲೆ ಇರುವ ಶಂಕರವಾಡಿ ಸೇತುವೆ ಮೇಲಿನಿಂದ ಬೀದರ್ ಮೂಲದ ವೃದ್ದೆ ಮಲ್ಲಮ್ಮ ನದಿಗೆ ಹಾರಿದ್ದಾರೆ. ನದಿಯಲ್ಲಿ ಮುಳುಗುತ್ತಿದ್ದಾಗ ವಾಹನ ಸವಾರರು ನೋಡಿ ಕೂಗಿದ್ದಾರೆ. ಅದೇ ಸಮಯದಲ್ಲಿ ಕಲಬುರ್ಗಿಯಿಂದ ವಾಡಿಗೆ ಬೈಕ್ ಮೇಲೆ ತೆರಳುತ್ತಿದ್ದ ಸಮೀರ್ ಹಾಗೂ ಮಹ್ಮದ್ ಮೊಹ್ಸಿನ್ ಪೈಕಿ ಸಮೀರ್ ಎಂಬ ಯುವಕ ಸೇತುವೆ ಮೇಲಿನಿಂದ ನದಿಗೆ ಹಾರಿ ಮುಳುಗುತ್ತಿದ್ದ ವೃದ್ದೆಯ ರಕ್ಷಣೆ ಮಾಡಿದ್ದಾರೆ.

ನಂತರ ಸ್ಥಳಕ್ಕೆ ಬಂದ ಗಸ್ತು ಪೊಲೀಸರು ಅಂಬುಲೆನ್ಸ್ ಮೂಲಕ ಮಹಿಳೆಯನ್ನು ಶಹಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹರಿಯುವ ನದಿಯಲ್ಲಿ ಪ್ರಾಣ ಲೆಕ್ಕಿಸದೇ ವೃದ್ದೆಯ ರಕ್ಷಿಸಿದ ಸಮೀರ್ ಸಾಹಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೃದ್ದೆಯ ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.