ADVERTISEMENT

ಖಜೂರಿ ಮಠಕ್ಕೆ ಮಹಿಳಾ ಉತ್ತರಾಧಿಕಾರಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 18:39 IST
Last Updated 29 ಮಾರ್ಚ್ 2021, 18:39 IST
ಆಳಂದ ತಾಲ್ಲೂಕಿನ ಖಜೂರಿ ಕೋರಣೇಶ್ವರ ಮಠದ ಉತ್ತರಾಧಿಕಾರಿಯಾಗಿ ನೀಲಲೋಚನಾ ತಾಯಿ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಮುರುಘೇಂದ್ರ ಸ್ವಾಮೀಜಿ, ಸತ್ಯಕ್ಕ ತಾಯಿ ಇದ್ದರು
ಆಳಂದ ತಾಲ್ಲೂಕಿನ ಖಜೂರಿ ಕೋರಣೇಶ್ವರ ಮಠದ ಉತ್ತರಾಧಿಕಾರಿಯಾಗಿ ನೀಲಲೋಚನಾ ತಾಯಿ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಮುರುಘೇಂದ್ರ ಸ್ವಾಮೀಜಿ, ಸತ್ಯಕ್ಕ ತಾಯಿ ಇದ್ದರು   

ಆಳಂದ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಗಡಿಗ್ರಾಮ ಖಜೂರಿಯ ಕೋರಣೇಶ್ವರ ಮಠದ ಉತ್ತರಾಧಿಕಾರಿಯನ್ನಾಗಿ ನೀಲ
ಲೋಚನಾ ತಾಯಿ ಅವರನ್ನು ಪೀಠಾಧಿಪತಿ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಘೋಷಿಸಿದರು.

ಖಜೂರಿಯ ಕೋರಣೇಶ್ವರ ಮಠಕ್ಕೆ ಈವರೆಗೆ ನಾಲ್ವರು ಮಠಾಧೀಶರು ಆಗಿದ್ದಾರೆ. ಸೋಮವಾರ ಮಠದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಸವಕಲ್ಯಾಣದ ಬಸವಾಶ್ರಮದ ಸತ್ಯಕ್ಕ ತಾಯಿ ಅವರ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರಿಸಲಾಯಿತು.

ಖಜೂರಿ ಗ್ರಾಮದವರಾದ ನೀಲಲೋಚನಾ ತಾಯಿಯವರು ನೆರೆಯ ಮಹಾರಾಷ್ಟ್ರದ ಮುರುಮದಲ್ಲಿ ಮರಾಠಿಯಲ್ಲಿ 10ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದಾರೆ. ನಂತರ ಚಿತ್ರದುರ್ಗದ ಮುರುಘಾಮಠದಲ್ಲಿ 3 ವರ್ಷ ಅಧ್ಯಾತ್ಮಿಕ, ಧಾರ್ಮಿಕ ಶಿಕ್ಷಣ ಪಡೆದು ಸನ್ಯಾಸ ಸ್ವೀಕರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.