ಕಲಬುರ್ಗಿ: ನಾಲ್ವರು ದುಷ್ಕರ್ಮಿಗಳ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಇಲ್ಲಿನ ಕೃಷ್ಣಾ ನಗರದ ದಶರಥ ಐಹೊಳೆ (28) ಎಂಬ ಯುವಕನನ್ನು ಕೊಲೆ ಮಾಡಿದೆ.
ನಗರದ ಟೈಲ್ಸ್ ಪಾಲಿಷಿಂಗ್ ಕೆಲಸ ಮಾಡುತ್ತಿದ್ದ ದಶರಥ ಆರೋಪಿಗಳಾದ ಸಂಜು ಗುತ್ತೇದಾರ, ರಾಹುಲ್ ಪರೀಟ, ಪವನ್ ಪರೀಟ ಹಾಗೂ ಪಾಣ್ಯಾ ಎಂಬುವವರಿಗೆ ಚಹಾದ ಬಿಲ್ ನೀಡಬೇಕಿತ್ತು. ಹಳೆಯ ವೈಷಮ್ಯವೂ ಇತ್ತು. ಇದರಿಂದಾಗಿ ಯುವಕನನ್ನು ಮಾರಕಾಸ್ತ್ರಗಳಿಂದ ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಾ ನಗರದಲ್ಲಿ ಕೊಂದು ಹಾಕಿದ್ದಾರೆ ಎಂದು ಪೊಲೀಸ್ ಕಮಿಷನರ್ ಸತೀಶಕುಮಾರ್ ಎನ್. ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.