ಎಚ್.ಡಿ.ಕೋಟೆ: ತಾಲ್ಲೂಕಿನ ಜಕ್ಕಹಳ್ಳಿ ಸಮೀಪ ಮಂಗಳವಾರ ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸಹೋದರ ಹಾಗೂ ಸಹೋದರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸರಗೂರು ಪಟ್ಟಣದ ಪೌರಕಾರ್ಮಿಕ ಕಾಲೊನಿ ನಿವಾಸಿ ರಾಚ ಎಂಬುವವರ ಮಕ್ಕಳಾದ ರೂಪೇಶ್ (25) ಮತ್ತು ಲಕ್ಷ್ಮಿದೇವಿ (30) ಮೃತಪಟ್ಟವರು.
ಸೊಳ್ಳೇಪುರ ಎ ಹಾಡಿಯ ಏಕಲವ್ಯ ವಸತಿ ಶಾಲೆಯಲ್ಲಿ ಲಕ್ಷ್ಮಿದೇವಿ ಕೆಲಸ ಮಾಡುತ್ತಿದ್ದರು. ಇಲ್ಲಿಂದ ಅಕ್ಕ ಲಕ್ಷ್ಮಿದೇವಿ ಅವರನ್ನು ಕರೆದುಕೊಂಡು ಸರಗೂರಿಗೆ ಬೈಕಿನಲ್ಲಿ ಹೋಗುತ್ತಿದ್ದರು. ಈ ಸಂದರ್ಭ, ಹ್ಯಾಂಡ್ಪೋಸ್ಟ್ ಕಡೆಯಿಂದ ಸರಗೂರು ಕಡೆಗೆ ತೆರಳುತ್ತಿದ್ದ ಟಿಪ್ಪರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಚಾಲಕ ತಲೆಮರೆಸಿಕೊಂಡಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.