ADVERTISEMENT

ಮಾವುತನ ಮೇಲೆ ಸಾಕಾನೆ ದಾಳಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 8:45 IST
Last Updated 25 ನವೆಂಬರ್ 2017, 8:45 IST

ಕುಶಾಲನಗರ: ಸಮೀಪದ ಆನೆಕಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಸಾಕಾನೆಯೊಂದು ಮಾವುತನ ಮೇಲೆ ದಾಳಿ ನಡೆಸಿದ್ದು ಮಾವುತನ ಸ್ಥಿತಿ ಗಂಭೀರವಾಗಿದೆ. ದುಬಾರೆ ಸಾಕಾನೆ ಶಿಬಿರದ ಮಾವುತ ಮಣಿ ಗಾಯಗೊಂಡವರು.

ಬೆಳಿಗ್ಗೆ 11ರ ಸುಮಾರಿಗೆ ‘ಮಯೂರ’ ಹೆಸರಿನ ಸಾಕಾನೆಯನ್ನು ಹೇರೂರು ಕಾಡಿಗೆ ಕರೆದೊಯ್ಯುವ ವೇಳೆ ಆನೆಯ ಬೆನ್ನು ಬಿಸಿಯಾಗಿದೆ. ಮಾವುತ ಪಕ್ಕದಲ್ಲಿದ್ದ ಮರವನ್ನೇರಿ ಆನೆಗೆ ವಿಶ್ರಾಂತಿ ನೀಡಲು ಮುಂದಾಗಿದ್ದಾರೆ. ಆಗ, ಕಾಲುಜಾರಿ ಮರದಿಂದ ಬಿದ್ದ ಕಾರಣ ಗಾಬರಿಗೊಂಡ ಆನೆಯು ದಾಳಿ ನಡೆಸಿದೆ. ಸುಮಾರು 100 ಮೀಟರ್‌ ಎಳೆದೊಯ್ದು ಎಸೆದಿದೆ.

ಮಾವುತನ ಸೊಂಟ, ಎಡಕಾಲಿನ ಭಾಗಕ್ಕೆ ಬಲವಾದ ಪೆಟ್ಟುಬಿದ್ದಿದೆ. ಕುಶಾಲನಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.