ADVERTISEMENT

ಮಡಿಕೇರಿ: ರೈಲ್ವೆ ಬ್ಯಾರಿಕೇಡ್‌ನೊಳಗೆ ಸಲೀಸಾಗಿ ನುಸುಳಿದ ಕಾಡಾನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 14:38 IST
Last Updated 14 ಮಾರ್ಚ್ 2024, 14:38 IST
   

ಮಡಿಕೇರಿ: ಸೋಮವಾರಪೇಟೆ ತಾಲ್ಲೂಕಿನ ಐಗೂರು ಸಮೀಪ ಗುರುವಾರ ರೈಲ್ವೆ ಬ್ಯಾರಿಕೇಡ್‌ನ್ನು ಕಾಡಾನೆಯೊಂದು ಸಲೀಸಾಗಿ ದಾಟಿದೆ.

ತೋಟಗಳ ಕಡೆಯಿಂದ ಬಂದ ಆನೆ ರೈಲ್ವೆ ಬ್ಯಾರಿಕೇಡ್‌ನೊಳಗೆ ನುಸುಳಿ ವಾಪಸ್ ಕಾಡಿಗೆ ತೆರಳಿದೆ.

ಈ ಕುರಿತು ‘‍ಪ್ರಜಾವಾಣಿ’ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಚೇತನ್ ಅವರನ್ನು ಸಂಪರ್ಕಿಸಿದಾಗ ಅವರು, ‘ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಕಾಡಾನೆಯೊಂದು ರೈಲ್ವೆ ಬ್ಯಾರಿಕೇಡ್ ದಾಟಿದೆ. ಇದು ಮಧ್ಯಮ ಗಾತ್ರದ ಆನೆಯಾಗಿರುವುದರಿಂದ ಸುಲಭವಾಗಿ ಬ್ಯಾರಿಕೇಡ್‌ನೊಳಗೆ ನುಸುಳಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.