ADVERTISEMENT

ಸೋಮವಾರಪೇಟೆ | ಆಟಿ ಮಾಸ: ಶತ್ರು ಸಂಹಾರ ಪೂಜೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:45 IST
Last Updated 25 ಜುಲೈ 2025, 2:45 IST
ಸೋಮವಾರಪೇಟೆ ಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದ ಭುವನೇಶ್ವರಿ ದೇವಿ ಸನ್ನಿಧಿಯಲ್ಲಿ ಪ್ರಾರಂಭವಾಗಿರುವ ಆಟಿ ಮಾಸದ ಪೂಜೆಯಲ್ಲಿ ಗುರುವಾರ ಶತ್ರು ಸಂಹಾರ ಪೂಜೆ ನಡೆಯಿತು 
ಸೋಮವಾರಪೇಟೆ ಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದ ಭುವನೇಶ್ವರಿ ದೇವಿ ಸನ್ನಿಧಿಯಲ್ಲಿ ಪ್ರಾರಂಭವಾಗಿರುವ ಆಟಿ ಮಾಸದ ಪೂಜೆಯಲ್ಲಿ ಗುರುವಾರ ಶತ್ರು ಸಂಹಾರ ಪೂಜೆ ನಡೆಯಿತು    

ಸೋಮವಾರಪೇಟೆ: ಕಕ್ಕೆಹೊಳೆ ಬಳಿಯ ಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದ ಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ ಆಟಿ ಮಾಸದ ಅಂಗವಾಗಿ ಗುರುವಾರ ಶತ್ರು ಸಂಹಾರ ಪೂಜೆ ನಡೆಯಿತು.

ದೇವಾಲಯದ ಅರ್ಚಕರಾದ ಮಣಿಕಂಠ ನಂಬೂದರಿ, ಜಗದೀಶ್ ಉಡುಪ, ಹಾನಗಲ್ಲು ಪ್ರಸಾದ್, ವಾದಿರಾಜ್ ಹಾಗೂ ವೆಂಕಟೇಶ ಅಯ್ಯರ್ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು. ಮಹಾಮಂಗಳಾರತಿಯೊಂದಿಗೆ, ದೇವಾಲಯಕ್ಕೆ ಆಗಮಿಸಿದ ಎಲ್ಲರಿಗೂ ಅನ್ನಸಂತರ್ಪಣೆ ನಡೆಯಿತು.

ಜುಲೈ 17ರಿಂದ ಪ್ರಾರಂಭವಾದ ಆಟಿ ಮಾಸದ ಪೂಜೆ ಪ್ರತಿ ದಿನ ಸಂಜೆ 6 ರಿಂದ 8ರ ವರೆಗೆ ನಡೆಯಲಿದ್ದು, ಆ.14 ಕೊನೆಯ ಪೂಜೆ ನಡೆಯುವುದು. ಆ.15ರಂದು ವಿಶೇಷ ಪೂಜೆ, ಹೋಮದೊಂದಿಗೆ ಸಮಾಪ್ತಿಗೊಳ್ಳುವುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.