ADVERTISEMENT

ಖಾಸಗಿ ಬಸ್‌, ಜೀಪು ನಡುವೆ ಅಪಘಾತ: ವೃದ್ಧೆ ಸಾವು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 14:15 IST
Last Updated 7 ಏಪ್ರಿಲ್ 2021, 14:15 IST
ಅಪಘಾತಕ್ಕೀಡಾದ ಜೀಪು
ಅಪಘಾತಕ್ಕೀಡಾದ ಜೀಪು   

ಮಡಿಕೇರಿ: ಮಡಿಕೇರಿ– ವಿರಾಜಪೇಟೆ ರಸ್ತೆಯ ಬೇತ್ರಿ ಬಳಿ ಖಾಸಗಿ ಬಸ್‌ ಹಾಗೂ ಜೀಪು ನಡುವೆ ಬುಧವಾರ ಬೆಳಿಗ್ಗೆ ಅಪಘಾತ ನಡೆದಿದ್ದು, ವೃದ್ಧೆಯೊಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.

ದಿವಂಗತ ಮುಕ್ಕಾಟಿ ಪೂವಯ್ಯ ಅವರ ಪತ್ನಿ ಲಕ್ಷ್ಮಿ (70) ಮೃತಪಟ್ಟವರು. ಅವರ ಪುತ್ರ, ನಿವೃತ್ತ ಯೋಧ ಮೋಹನ್‌ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿರಾಜಪೇಟೆ ಕಡೆಯಿಂದ ಖಾಸಗಿ ಬಸ್‌ ಮಡಿಕೇರಿಯತ್ತ ಬರುತ್ತಿತ್ತು. ಮಡಿಕೇರಿ ಕಡೆಯಿಂದ, ಜೀಪು ವಿರಾಜಪೇಟೆ ಕಡೆ ತೆರಳುತ್ತಿತ್ತು. ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ರಸ್ತೆ ಬದಿಯ ವಿದ್ಯುತ್‌ ಕಂಬವೂ ಮುರಿದು ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT