ADVERTISEMENT

ಕೊಡಗು: ಕೊಲೆಗೆ ಯತ್ನ, ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2018, 17:52 IST
Last Updated 30 ಸೆಪ್ಟೆಂಬರ್ 2018, 17:52 IST

ಸೋಮವಾರಪೇಟೆ: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಚಕ್ರವರ್ತಿ ಬಸ್ ಮಾಲೀಕ ಕೆ.ಬಿ. ಸುರೇಶ್ ಅವರಿಗೆ ಅಪರಿಚಿತರು ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.

‘ಶನಿವಾರ ಸಂಜೆ ಮಡಿಕೇರಿ ರಸ್ತೆಯ ಪೆಟ್ರೋಲ್ ಬಂಕ್ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಕಾರು ಡಿಕ್ಕಿ ಹೊಡೆಯಿತು, ಕೆಳಗೆ ಬಿದ್ದ ಮೇಲೆ ಮತ್ತೊಂದು ಜೀಪ್‌ನಿಂದ ಬೈಕ್‌ಗೆ ಡಿಕ್ಕಿ ಹೊಡೆದರು. ಇದೊಂದು ಕೊಲೆ ಯತ್ನ’ ಎಂದು ಸುರೇಶ್‌ ದೂರು ನೀಡಿದ್ದಾರೆ.

ಡಿಕ್ಕಿಪಡಿಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.