ADVERTISEMENT

ಭಗವದ್ಗೀತೆ ಕಲಿಕಾ ಶಿಬಿರ ಆರಂಭ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 7:30 IST
Last Updated 7 ಸೆಪ್ಟೆಂಬರ್ 2025, 7:30 IST
ರಾಜಪೇಟೆಯ ಅರಮೇರಿ ಕಳಂಚೇರಿ ಮಠದ ದಿಶಾ ಎಕ್ಸಿಪಿರಿಯನ್ಷಲ್‌ ಲರ್ನಿಂಗ್ ವತಿಯಿಂದ ಭಗವದ್ಗೀತೆ ಕಲಿಕಾ ಕೋರ್ಸ್‌ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಡೆಯಿತು
ರಾಜಪೇಟೆಯ ಅರಮೇರಿ ಕಳಂಚೇರಿ ಮಠದ ದಿಶಾ ಎಕ್ಸಿಪಿರಿಯನ್ಷಲ್‌ ಲರ್ನಿಂಗ್ ವತಿಯಿಂದ ಭಗವದ್ಗೀತೆ ಕಲಿಕಾ ಕೋರ್ಸ್‌ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಡೆಯಿತು   

ಮಡಿಕೇರಿ: ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ದಿಶಾ ಎಕ್ಸಿಪಿರಿಯನ್ಷಲ್‌ ಲರ್ನಿಂಗ್ ವತಿಯಿಂದ ಭಗವದ್ಗೀತೆ ಕಲಿಕಾ ಕೋರ್ಸ್‌ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಆರಂಭಗೊಂಡಿತು.

ಒಟ್ಟು 6 ತಿಂಗಳ ಈ ಕೋರ್ಸ್‌ನಲ್ಲಿ 25 ಜನರ ಕಲಿಕಾ ತಂಡವು ಮುಂದಿನ ವರ್ಷ ಮಾರ್ಚ್ ತಿಂಗಳವರೆಗೆ ತಿಂಗಳಿಗೊಂದರಂತೆ ತರಗತಿಗಳಲ್ಲಿ ಭಾಗವಹಿಸಲಿದೆ. ದಿಶಾ ತರಬೇತುದಾರರಾದ ಪ್ರೀತಮ್ ಪೊನ್ನಪ್ಪ ಹಾಗೂ ಕುಸುಮ್ ಟಿಟೊ ಮಹಾಭಾರತ ಕಥೆಯ ಮೂಲಕ ಈ ಕೋರ್ಸ್‌ ಅನ್ನು ಆರಂಭಿಸಿದರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT