ADVERTISEMENT

ನಾಪೋಕ್ಲು: ಮರ ಬಿದ್ದು ಎತ್ತು ಸಾವು

​ಪ್ರಜಾವಾಣಿ ವಾರ್ತೆ
Published 23 ಮೇ 2023, 15:54 IST
Last Updated 23 ಮೇ 2023, 15:54 IST
ಭಾಗಮಂಡಲ ಸಮೀಪದ ತಣ್ಣಿಮಾನಿ ಗ್ರಾಮದ ಕೃಷಿಕ ಮಲ್ಲೇಶ್ ಎಂಬವರ ದನದ ಕೊಟ್ಟಿಗೆಯ ಮೇಲೆ ಸೋಮವಾರ ಸಂಜೆ ಮರವೊಂದು ಮುರಿದು ಬಿದ್ದು ಎತ್ತು ಮೃತಪಟ್ಟಿದೆ.
ಭಾಗಮಂಡಲ ಸಮೀಪದ ತಣ್ಣಿಮಾನಿ ಗ್ರಾಮದ ಕೃಷಿಕ ಮಲ್ಲೇಶ್ ಎಂಬವರ ದನದ ಕೊಟ್ಟಿಗೆಯ ಮೇಲೆ ಸೋಮವಾರ ಸಂಜೆ ಮರವೊಂದು ಮುರಿದು ಬಿದ್ದು ಎತ್ತು ಮೃತಪಟ್ಟಿದೆ.   

ನಾಪೋಕ್ಲು: ಇಲ್ಲಿನ ಭಾಗಮಂಡಲ ವ್ಯಾಪ್ತಿಯಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ. ಎರಡು ದಿನಗಳಿಂದ ಉತ್ತಮ ಮಳೆಯಾಗಿದೆ.

ಸಮೀಪದ ತಣ್ಣಿಮಾನಿ ಗ್ರಾಮದ ಕೃಷಿಕ ಮಲ್ಲೇಶ್ ಎಂಬುವರ ದನದ ಕೊಟ್ಟಿಗೆಯ ಮೇಲೆ ಸೋಮವಾರ ಸಂಜೆ ಮರ ಬಿದ್ದ ಪರಿಣಾಮ ಕೊಟ್ಟಿಗೆಗೆ ಹಾನಿಯಾಗಿದ್ದು, ಎತ್ತು ಮೃತಪಟ್ಟಿದೆ. ಮತ್ತೊಂದು ಎತ್ತಿನ ಕಾಲು ಮುರಿದಿದೆ.

ಸ್ಥಳಕ್ಕೆ ಭಾಗಮಂಡಲದ ಪಶು ವೈದ್ಯಾಧಿಕಾರಿ ಚೇತನ್ ತೆರಳಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.