ವಿರಾಜಪೇಟೆ: ಸಮೀಪದ ಅರಮೇರಿ ಗ್ರಾಮದ ಎಂಟುಮಾಣಿಕೇರಿ ಶ್ರೀ ಕಾವೇರಿ ಸಂಘದ 5ನೇ ವಾರ್ಷಿಕ ಮಹಾಸಭೆಯು ಈಚೆಗೆ ಸಂಘದ ಅಧ್ಯಕ್ಷ ಉದಿಯಂಡ ಡಿ.ಚಂಗಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೆ.ಡಿ.ಸಿ.ಸಿ ಬ್ಯಾಂಕ್ನ ನಿರ್ದೇಶಕರಾಗಿ ಚುನಾವಣೆಯಲ್ಲಿ ಆಯ್ಕೆಯಾದ ಪೂಳಂಡ ಪಿ. ವಿನು ಪೆಮ್ಮಯ್ಯ ಮತ್ತು ಸೆಸ್ಕ್ನ ವಿರಾಜಪೇಟೆ ಶಾಖೆಯ ಉದ್ಯೋಗಿ ಸಲ್ಮಾನ್ ಖಾನ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಮೇಜರ್ ಪೂಳಂಡ ಪಿ ಕಾರ್ಯಪ್ಪ ರಕ್ಷಿತ್ ಅವರ ಪ್ರೋತ್ಸಾಹಕ ವಿದ್ಯಾನಿಧಿಯನ್ನು ನಾಯಕಂಡ ಆಶಿಕ್ ಹರೀಶ್ ಅವರಿಗೆ ವಿತರಿಸಲಾಯಿತು.
ಸಂಘದ ಕಟ್ಟಡದ ಹಿಂಭಾಗದಲ್ಲಿ ನಿರ್ಮಿಸಿದ ತಡೆಗೋಡೆಯನ್ನು ದಾನಿಗಳಾದ ಪೊಯ್ಯಟ್ಟಿರ ಜಿ ಪ್ರಧಾನ್ ತಮ್ಮಯ್ಯ ದಂಪತಿ ಉದ್ಘಾಟಿಸಿದರು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ಕಾರ್ಯದರ್ಶಿ ಸೋಮಯಂಡ ಕೆ.ರೇಷ್ಮಾ ತಿಮ್ಮಯ್ಯ, ಪೂಳಂಡ ಲೀಲಾ, ಪವೀನಾ, ಮೈನಾ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.