ADVERTISEMENT

ಕೋವಿಡ್‌ ಲಾಕ್‌ಡೌನ್‌: ಪರಿಹಾರಕ್ಕೆ ವರ್ಕ್‌ಶಾಪ್‌ ಮಾಲೀಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 5:44 IST
Last Updated 5 ಜೂನ್ 2021, 5:44 IST
ಶನಿವಾರಸಂತೆ ಪಟ್ಟಣದ ಶ್ರೀಮಂಜುನಾಥ್ ಎಂಜಿನಿಯರಿಂಗ್ ವರ್ಕ್‌‌ಶಾಪ್ ಆವರಣದಲ್ಲಿ ಬೆಳೆದಿರುವ ಕಳೆಗಿಡ
ಶನಿವಾರಸಂತೆ ಪಟ್ಟಣದ ಶ್ರೀಮಂಜುನಾಥ್ ಎಂಜಿನಿಯರಿಂಗ್ ವರ್ಕ್‌‌ಶಾಪ್ ಆವರಣದಲ್ಲಿ ಬೆಳೆದಿರುವ ಕಳೆಗಿಡ   

ಶನಿವಾರಸಂತೆ: ಕೋವಿಡ್-19 ಲಾಕ್‌ಡೌನ್‌ನಿಂದ ವರ್ಕ್‌ಶಾಪ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಮಾಲೀಕರ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಜೀವನ ಸಾಗಿಸಲು ಪರದಾಡುವ ಸ್ಥಿತಿನಿರ್ಮಾಣವಾಗಿದೆ.

ಶನಿವಾರಸಂತೆ ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು ನೂರು ವರ್ಕ್‌ಶಾಪ್‌ಗಳಿವೆ. ಬಾಡಿಗೆ, ವಿದ್ಯುತ್ ಬಿಲ್, ಕಾರ್ಮಿಕರ ಕೊರತೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಮಾಲೀಕರು ಎದುರಿಸುತ್ತಿದ್ದಾರೆ. ಇದರ ನಡುವೆ ಲಾಕ್‌ಡೌನ್ ವಿಸ್ತರಣೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

‘ಇನ್ನೇನು ಮುಂಗಾರು ಮಳೆ ಆರಂಭವಾಗುತ್ತಿದೆ. ಕೃಷಿ ಚಟುವಟಿಕೆಗಳು ಆರಂಭವಾದರೆ ಮುಂದಿನ ಸಾಲಿನ ಭತ್ತ ಮತ್ತು ಕಾಫಿ ಕೊಯ್ಲು ಸಮಯ ಬರುವವರೆಗೆ ವರ್ಕ್‌ಶಾಪ್‌ನಲ್ಲಿ ಕೆಲಸವಿಲ್ಲದೆ ಇರಬೇಕಾಗುತ್ತದೆ. ಅಲ್ಲಿಯವರೆಗೆ ಜೀವನ ಸಾಗಿಸುವುದು ಹೇಗೆ?. ಎಲ್ಲರಂತೆ ನಮಗೂ ಸರ್ಕಾರದಿಂದ ಸೂಕ್ತ ಪರಿಹಾರ ಸಿಕ್ಕಿದರೆ ಅನುಕೂಲವಾಗುತ್ತದೆ’ ಎಂದು ಶ್ರೀ ಮಂಜುನಾಥ ಎಂಜಿನಿಯರಿಂಗ್ ವರ್ಕ್ಸ್‌ನ ಮಾಲೀಕ ಎ.ಡಿ.ಮೋಹನ್ ಕುಮಾರ್ ಅಳಲು ತೋಡಿಕೊಂಡರು.

ADVERTISEMENT

ಲಾಕ್‌ಡೌನ್‌ನಿಂದಾಗಿ ವರ್ಕ್‌ ಶಾಪ್‌ಗಳು ಬಾಗಿಲು ಮುಚ್ಚಿದ್ದು, ಅಂಗಡಿ ಮುಂದೆ ಕಳೆ ಗಿಡಗಳು ಬೆಳೆದಿವೆ. ಲಾಕ್‌ಡೌನ್‌ ವಿಸ್ತರಣೆ ಆಗುತ್ತಲೇ ಇದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.