ಚಿಕ್ಕಮಗಳೂರು: ಕಾಫಿ ಮಂಡಳಿ ಮಾಜಿ ಅಧ್ಯಕ್ಷ ಎಂ.ಎಸ್.ಭೋಜೆಗೌಡ (74) ಅವರು ನಗರದ ಆಶ್ರಯ ಆಸ್ಪತ್ರೆಯಲ್ಲಿ ನಿಧನರಾದರು.
ಅರಿಶಿನಗುಪ್ಪೆ ಬಳಿಯ ಕೃಷ್ಣಗಿರಿ ತೋಟದಲ್ಲಿ ಮಧ್ಯಾಹ್ನ ಓಡಾಡುವಾಗ ಜೇನುಹುಳುಗಳು ಕಚ್ಚಿ ಅಸ್ವಸ್ಥವಾಗಿದ್ದ ಭೋಜೆಗೌಡ ಅವರನ್ನು ಆಸ್ಪತ್ರೆಗೆ ಒಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು. ಅವರಿಗೆ ಪತ್ನಿ ಗೀತಾ, ಪುತ್ರರಾದ ಜಯಕೀರ್ತಿ, ಹಿಮಕೀರ್ತಿ ಇದ್ದಾರೆ. ಭೋಜೆಗೌಡ ಅವರು ಎರಡು ಬಾರಿ ಕಾಫಿ ಮಂಡಳಿ ಅಧ್ಯಕ್ಷರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.