ADVERTISEMENT

ಸುಂಟಿಕೊಪ್ಪ: ಹನುಮ ಜಯಂತಿ, ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 4:20 IST
Last Updated 24 ಏಪ್ರಿಲ್ 2024, 4:20 IST
ಸುಂಟಿಕೊಪ್ಪ ಸಮೀಪದ ಮಾರುತಿ ನಗರದ ಆಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಮತ್ತು ದೇವಾಲಯದ ವಾರ್ಷಿಕೋತ್ಸವ ಮಂಗಳವಾರ ನಡೆಯಿತು.
ಸುಂಟಿಕೊಪ್ಪ ಸಮೀಪದ ಮಾರುತಿ ನಗರದ ಆಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಮತ್ತು ದೇವಾಲಯದ ವಾರ್ಷಿಕೋತ್ಸವ ಮಂಗಳವಾರ ನಡೆಯಿತು.   

ಸುಂಟಿಕೊಪ್ಪ: ಸಮೀಪದ ಕೊಡಗರಹಳ್ಳಿ ವ್ಯಾಪ್ತಿ ಮಾರುತಿನಗರದ ಆಂಜನೇಯ ದೇವಾಲಯದ 12ನೇ ವರ್ಷದ ವಾರ್ಷಿಕೋತ್ಸವ ಹಾಗೂ ಹನುಮ ಜಯಂತಿಯು ಮಂಗಳವಾರ ಶ್ರದ್ಧಾಭಕ್ತಿಯಿಂದ ನಡೆಯಿತು.

ಬೆಳಿಗ್ಗೆ ನವಗ್ರಹ ಪೂಜೆ, ಗಣಪತಿ ಹೋಮ, ಆಂಜನೇಯ ದೇವರಿಗೆ ಅಭಿಷೇಕ, ಅಲಂಕಾರ ಪೂಜೆ, ವೀಳ್ಯದೆಲೆ ಅರ್ಚನೆ, ಕುಂಕುಮಾರ್ಚನೆ, ತುಳಸಿ ಅರ್ಚನೆ, ಮಹಾಪೂಜೆ ನಡೆಯಿತು. ಮದ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು.

ಕೊಡಗರಹಳ್ಳಿ, ಏಳನೇ ಹೊಸಕೋಟೆ, ಸುಂಟಿಕೊಪ್ಪ, ಎಮ್ಮೆಗುಂಡಿ ಸೇರಿದ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಾಡಿಸಲಾಗಿತ್ತು. ಗ್ರಾಮದ ನೂರಾರು ಭಕ್ತರು ಪಾಲ್ಗೊಂಡಿದ್ದರು.

ADVERTISEMENT

ಅರ್ಚಕರಾದ ಹಾ.ಮಾ.ಗಣೇಶ್ ಶರ್ಮಾ, ನರಸಿಂಹ ಭಟ್, ಶಿವ ಶೇಷಾದ್ರಿ ಭಟ್, ಚಂದ್ರು ಭಟ್ ಪೂಜೆ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.