ADVERTISEMENT

ತೀರ್ಥೋದ್ಭವ: ತಲಕಾವೇರಿ ಬೆಟ್ಟ ಹತ್ತಿದ ಸಾವಿರಾರು ಭಕ್ತರು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2023, 20:56 IST
Last Updated 17 ಅಕ್ಟೋಬರ್ 2023, 20:56 IST
   

ಮಡಿಕೇರಿ: ಕಾವೇರಿ ತೀರ್ಥೋದ್ಭವಕ್ಕಾಗಿ ಸಹಸ್ರಾರು ಭಕ್ತರು ಭಾಗಮಂಡಲದಿಂದ ತಲಕಾವೇರಿಗೆ ಪಾದಯಾತ್ರೆ ನಡೆಸಿದರು.

ಬೆಂಗಳೂರು, ಮೈಸೂರು, ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಭಕ್ತರು ಸಾಂಪ್ರದಾಯಿಕ ಕೊಡವ ಉಡುಗೆ ಧರಿಸಿ ಕಾವೇರಿ ಮಾತೆಯ ಸ್ತುತಿ ಗೀತೆಗಳನ್ನು ಹಾಡುತ್ತಾ ಬೆಟ್ಟ ಹತ್ತಿದರು.

ಇವರಲ್ಲಿ ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್ ಪೊನ್ನಣ್ಣ, ಶಾಸಕ ಎ.ಎಸ್.ಪೊನ್ನಣ್ಣ ಇದ್ದರು.

ADVERTISEMENT

ಅ.18 ರ ನಸುಕಿನ 1.27ಕ್ಕೆ ತೀರ್ಥೋದ್ಭವ ನಿಗದಿಯಾಗಿತ್ತು. ಸಾವಿರಾರು ಜನ ತೀರ್ಥೋದ್ಭವದಲ್ಲಿ ಪಾಲ್ಗೊಂಡು ಫುಳಕಿತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.