ಗೋಣಿಕೊಪ್ಪಲು: ಬಿರುನಾಣಿಯ ಕಾಫಿ ಬೆಳೆಗಾರ ಚೊಟ್ಟಂಗಡ ರೋಷನ್ ಅವರ ತೋಟದ ಲೈನ್ ಮನೆಯಲ್ಲಿ ಅಡಗಿದ್ದ ಅಂದಾಜು 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಆಂಟೋನಿ ಹಿಡಿದು ಅರಣ್ಯಕ್ಕೆ ಬಿಟ್ಟರು.
ತೋಟದ ಕಾರ್ಮಿಕರು ಸೋಮವಾರ ಮಧ್ಯಾಹ್ನ 1 ಗಂಟೆ ವೇಳೆಯಲ್ಲಿ ಮನೆಗೆ ತೆರಳಿದಾಗ ಕಾಳಿಂಗ ಸರ್ಪದ ಸದ್ದು ಕೇಳಿ ಬಂದಿದೆ. ಇದನ್ನು ಕಂಡ ಕಾರ್ಮಿಕರು ಮಾಲೀಕ ರೋಷನ್ ಅವರಿಗೆ ತಿಳಿಸಿದ್ದಾರೆ. ಕೂಡಲೇ ರೋಷನ್ ಆಂಟೋನಿಯವರನ್ನು ಕರೆಸಿ ಕಾಳಿಂಗ ಸರ್ಪವನ್ನು ಸೆರೆಹಿಡಿಸಿ ಆತಂಕವನ್ನು ದೂರ ಮಾಡಿದರು.
ಸೆರೆ ಹಿಡಿದ ಕಾಳಿಂಗವನ್ನು ಆಂಟೋನಿ ಚೀಲದಲ್ಲಿ ತುಂಬಸಿಕೊಂಡು ಸಾಗಿ ಬ್ರಹ್ಮಗಿರಿ ಅರಣ್ಯಕ್ಕೆ ಬಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.