ಪೊನ್ನಂಪೇಟೆ: ಕಾಡಾನೆಗಳ ಹಿಂಡೊಂದು ಹುಲ್ಲಿನ ಮೆದೆಗೆ ದಾಳಿ ಮಾಡಿ ನಾಶಗೊಳಿಸಿವೆ.
ಭಾನುವಾರ ರಾತ್ರಿ ಕಿರುಗೂರು ಗ್ರಾಮದ ಕೃಷಿಕ ಕಾಕೇರ ರವಿ ಎಂಬುವವರು ಸಂಗ್ರಹಿಸಿಟ್ಟಿದ ಹುಲ್ಲು ನಾಶ ಮಾಡಿವೆ. ಸುಮಾರು 800 ಹುಲ್ಲಿನ ಕಂತೆ ನಾಶವಾಗಿದ್ದು, ಸುಮಾರು ₹18 ಸಾವಿರ ಹಣ ನಷ್ಟ ಉಂಟಾಗಿದೆ ಎಂದು ಕೃಷಿಕ ರವಿ ತಿಳಿಸಿದ್ದಾರೆ.
ಗ್ರಾಮದಲ್ಲಿ ಹಲವು ದಿನಗಳಿಂದ ಬೀಡುಬಿಟ್ಟಿರುವ ಮೂರು ಕಾಡಾನೆಗಳು ರಾತ್ರಿ ಹುಲ್ಲಿನ ಮೆದೆಗೆ ದಾಳಿ ನಡೆಸಿವೆ. ಇದರಿಂದ ಸಾಕಷ್ಟು ಹುಲ್ಲು ಕೆಸರಿನಲ್ಲಿ ಹೂತು ಹೋಗಿವೆ. ಒಂದಷ್ಟು ಹುಲ್ಲು ನೀರಿನಲ್ಲಿ ತೋಯ್ದು ಹೋಗಿರುವುದರಿಂದ ಸಂಗ್ರಹಿಸಲು ತೊಂದರೆಯಾಗುತ್ತಿದೆ. ಜಾನುವಾರುಗಳು ಅಹಾರ ಕಳೆದುಕೊಂಡಿದೆ.
ಕಾಡಾನೆಗಳ ಉಪಟಳ ಗ್ರಾಮದಲ್ಲಿನ ತೋಟಗಳಲ್ಲಿ ನಿರಂತರವಾಗಿ ನಡೆಯುತ್ತಿದೆ. ಕೊರಕುಟ್ಟೀರ ಬೇಬಿ ನಂಜಪ್ಪ, ಪಡಿಞರಂಡ ಗಿರೀಶ್ ಎಂಬುವವರಿಗೆ ಸೇರಿದ ತೋಟದಲ್ಲಿನ ಬಾಳೆ ಗಿಡಗಳನ್ನು ಕೂಡ ನಾಶ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.