
ಪ್ರಜಾವಾಣಿ ವಾರ್ತೆ
ಕೊಡಗು: ಜಿಲ್ಲೆಯಲ್ಲಿ ಡಿ. 4ರಂದು ಪುತ್ತರಿ (ಹುತ್ತರಿ) ಸಂಭ್ರಮ ಗರಿಗೆದರಲಿದೆ. ಕಕ್ಕಬ್ಬೆಯ ಪಾಡಿ ಶ್ರೀಇಗ್ಗುತ್ತಪ್ಪ ದೇವಸ್ಥಾನದಲ್ಲಿ 4ರಂದು ರಾತ್ರಿ 8.10ಕ್ಕೆ ನೆರೆ ಕಟ್ಟುವುದು, 9.10ಕ್ಕೆ ಕದಿರು ತೆಗೆಯುವುದು, 10.10ಕ್ಕೆ ತೀರ್ಥಪ್ರಸಾದ ವಿತರಣೆ ನಡೆಯಲಿದೆ.
ಇಲ್ಲಿನ ಓಂಕಾರೇಶ್ವರ ದೇಗುಲ ಸೇರಿ ಇತರ ಎಲ್ಲ ಕಡೆ ರಾತ್ರಿ 8.40ಕ್ಕೆ ನೆರೆ ಕಟ್ಟುವುದು, 9.40ಕ್ಕೆ ಕದಿರು ತೆಗೆಯಲಾಗುತ್ತದೆ. ಡಿ. 5ರಂದು ಮಧ್ಯಾಹ್ನ 3ಕ್ಕೆ ಕೋಟೆ ಆವರಣದಲ್ಲಿ ಹುತ್ತರಿ ಕೋಲಾಟ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.