ADVERTISEMENT

21ರಂದು ಕೈಲ್ ಪೊವುದ್ ನಮ್ಮೆರ ಸಂತೋಷಕೂಟ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 7:18 IST
Last Updated 12 ಸೆಪ್ಟೆಂಬರ್ 2025, 7:18 IST
ಕೈಲ್ ಮುಹೂರ್ತ ಹಬ್ಬದ ಹಬ್ಬದ ಸಂದರ್ಭದಲ್ಲಿ ಆಯುಧಗಳನ್ನು ಪೂಜಿಸಲು ಬಳಸುವ ಗೌರಿಹೂವು.(ಇದನ್ನು ತೋಕು ಪೂ ಎಂದು ಕರೆಯುತ್ತಾರೆ)
ಕೈಲ್ ಮುಹೂರ್ತ ಹಬ್ಬದ ಹಬ್ಬದ ಸಂದರ್ಭದಲ್ಲಿ ಆಯುಧಗಳನ್ನು ಪೂಜಿಸಲು ಬಳಸುವ ಗೌರಿಹೂವು.(ಇದನ್ನು ತೋಕು ಪೂ ಎಂದು ಕರೆಯುತ್ತಾರೆ)   

ಸೋಮವಾರಪೇಟೆ: ಇಲ್ಲಿನ ಕೊಡವ ಸಮಾಜದ ವತಿಯಿಂದ ಸೆ. 21ರಂದು ಬೆಳಿಗ್ಗೆ 10-30ಕ್ಕೆ ಕೈಲ್ ಪೊವುದ್ ನಮ್ಮೆರ ಸಂತೋಷಕೂಟ ಕಾರ್ಯಕ್ರಮ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಿಯಪ್ಪ ಉದ್ಘಾಟಿಸಲಿದ್ದಾರೆ. ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಬಿ. ಅಭಿಮನ್ಯುಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೊಚ್ಚೆರ ಎ. ನೆಹರು ಪಾಲ್ಗೊಳ್ಳುವರು. ಸಮಾಜ ಬಾಂಧವರಿಗೆ, ಮಕ್ಕಳಿಗೆ ವಿವಿಧ ಸ್ಪರ್ಧೆ ಹಾಗೂ ಪರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಹಗ್ಗ ಜಗ್ಗಾಟ ಸೇರಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ ಎಂದು ಸಮಾಜದ ಪ್ರಧಾನ ಕಾರ್ಯದರ್ಶಿ ಅನಿಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT