ಮಡಿಕೇರಿ: 1,900 ನಿವೇಶನರಹಿತರಿಗೆ ನಿವೇಶನ ನೀಡಬೇಕು ಎಂದು ಕಳೆದ ಸಭೆಯಲ್ಲಿ ಚರ್ಚೆಯಾದ ವಿಷಯವನ್ನು ಸಭೆಯ ನಡಾವಳಿಯಲ್ಲಿ ಸೇರಿಸಿಲ್ಲ ಎಂದು ಇಲ್ಲಿ ಶನಿವಾರ ಆರಂಭವಾದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಎಸ್ ಡಿ ಪಿ ಐ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸೂರಿಲ್ಲದವರಿಗೆ ನಿವೇಶನ ನೀಡಬಾರದು ಎಂದು ಯಾರ ಒತ್ತಡ ಇದೆ ಒಂದು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅಮಿನ್ ಮೊಹಿಸಿನ್ ಕಿಡಿಕಾರಿದರು.
ಬಿಜೆಪಿ ಹಾಗೂ ಎಸ್ ಡಿ ಪಿ ಐ ಸದಸ್ಯರ ವಾಗ್ವಾದದಿಂದ ಸಭೆಯು ಆರಂಭದಲ್ಲೇ ಗದ್ದಲದಲ್ಲಿ ಮುಳುಗಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.