ADVERTISEMENT

ಮಡಿಕೇರಿ: ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಪರಿಶೀಲನೆ

ಲೋಕಾಯುಕ್ತದ ಕಾರ್ಯಪಾಲಕ ಎಂಜಿನಿಯರ್ ತಂಡವನ್ನು ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 4:52 IST
Last Updated 19 ಜುಲೈ 2023, 4:52 IST
ಮಡಿಕೇರಿಯಲ್ಲಿ ಕೊಡಗು ಜಿಲ್ಲಾಧಿಕಾರಿ ಕಚೇರಿ ತಡೆಗೋಡೆಯ ಕಾಮಗಾರಿಯನ್ನು ಲೋಕಾಯುಕ್ತದ ತಾಂತ್ರಿಕ ತಂಡ ಮಂಗಳವಾರ ಪ‍ರಿಶೀಲನೆ ನಡೆಸಿತು
ಮಡಿಕೇರಿಯಲ್ಲಿ ಕೊಡಗು ಜಿಲ್ಲಾಧಿಕಾರಿ ಕಚೇರಿ ತಡೆಗೋಡೆಯ ಕಾಮಗಾರಿಯನ್ನು ಲೋಕಾಯುಕ್ತದ ತಾಂತ್ರಿಕ ತಂಡ ಮಂಗಳವಾರ ಪ‍ರಿಶೀಲನೆ ನಡೆಸಿತು   

ಮಡಿಕೇರಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ₹ 7 ಕೋಟಿ ಮೊತ್ತದ ತಡೆಗೋಡೆ ಕಾಮಗಾರಿ ಕುರಿತು ಲೋಕಾಯುಕ್ತದ ತಾಂತ್ರಿಕ ಸಮಿತಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ದೂರುದಾರ ತೆನ್ನೀರಾ ಮೈನಾ ಅವರೊಂದಿಗೆ ಬಂದ ಲೋಕಾಯುಕ್ತದ ಕಾರ್ಯಪಾಲಕ ಎಂಜಿನಿಯರ್‌ ರವಿಶಂಕರ್ ನೇತೃತ್ವದ ತಂಡವು ತಡೆಗೋಡೆಯ ತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕಿತು. ಇವರೊಂದಿಗೆ ಲೋಕೋಪಯೋಗಿ ಇಲಾಖೆಯ ಗುಣಮಟ್ಟ ನಿಯಂತ್ರಕರ ತಂಡವೂ ಗುಣಮಟ್ಟವನ್ನು ಪರೀಕ್ಷಿಸಿತು.

ಕಾಂಗ್ರೆಸ್ ವಕ್ತಾರ ತೆನ್ನೀರಾ ಮೈನಾ ಅವರು ತಡೆಗೋಡೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ADVERTISEMENT

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.