ADVERTISEMENT

ಸಡಗರದ ಓಣಂ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 16:49 IST
Last Updated 8 ಸೆಪ್ಟೆಂಬರ್ 2022, 16:49 IST
ಸಿದ್ದಾಪುರ ಸಮೀಪದ ವಾಲ್ನೂರು ತ್ಯಾಗತ್ತೂರು ನಿವಾಸಿ ಟಿ.ಸಿ ಜಯಪ್ರಕಾಶ್ ಹಾಗೂ ಕುಟುಂಬಸ್ಥರು ತಮ್ಮ‌ ಮನೆಯ ಮುಂದೆ ಹೂವಿನ ರಂಗೋಲಿ ರಚಿಸಿ ಓಣಂ ಹಬ್ಬವನ್ನು ಆಚರಿಸಿದರು
ಸಿದ್ದಾಪುರ ಸಮೀಪದ ವಾಲ್ನೂರು ತ್ಯಾಗತ್ತೂರು ನಿವಾಸಿ ಟಿ.ಸಿ ಜಯಪ್ರಕಾಶ್ ಹಾಗೂ ಕುಟುಂಬಸ್ಥರು ತಮ್ಮ‌ ಮನೆಯ ಮುಂದೆ ಹೂವಿನ ರಂಗೋಲಿ ರಚಿಸಿ ಓಣಂ ಹಬ್ಬವನ್ನು ಆಚರಿಸಿದರು   

ಸಿದ್ದಾಪುರ: ಸಿದ್ದಾಪುರ, ನೆಲ್ಯಹುದಿಕೇರಿ ಸೇರಿದಂತೆ ಸುತ್ತಮುತ್ತಲಿನ ‌ಪ್ರದೇಶದ ಮಲಯಾಳಿ ಸಮುದಾಯದ ಜನರು ಸಡಗರದಿಂದ ಓಣಂ ಆಚರಣೆ ಮಾಡಿದರು.

ಜಿಲ್ಲೆಯಲ್ಲಿ ಎರಡು ವರ್ಷ ಪ್ರವಾಹ ಹಾಗೂ ಎರಡು ವರ್ಷ ಕೊರೊನಾ ಹಿನ್ನೆಲೆಯಲ್ಲಿ ಓಣಂ ಸಂಭ್ರಮ ಕಳೆಗುಂದಿತ್ತು. ಪ್ರಸ್ತುತ ವರ್ಷ ಮಲಯಾಳಿ ಸಮುದಾಯದ ಜನರು ಮನೆಯ ಮುಂಭಾಗ ಹೂವಿನ ರಂಗೋಲಿ ರಚಿಸಿ ಸಂಭ್ರಮದಿಂದ ಓಣಂ ಆಚರಿಸಿದರು. ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.

ಸುಮಾರು 21 ಬಗೆಯ ಖಾದ್ಯಗಳನ್ನು ಹೊಂದಿರುವ ಓಣಂ ಹಬ್ಬದೂಟವನ್ನು ನೆಲ್ಯಹುದಿಕೇರಿ, ಸಿದ್ದಾಪುರದ ಹೊಟೇಲ್‌ಗಳಲ್ಲೂ ಲಭ್ಯವಿತ್ತು. ವಿಶೇಷವಾದ ಓಣಂ ಹಬ್ಬದೂಟವನ್ನು ಮನೆ ಮಂದಿಯೆಲ್ಲಾ ಸವಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.