ಸುಂಟಿಕೊಪ್ಪ: ಕಾರು ಅಪಘಾತದಲ್ಲಿ ಮನೆಯವರೆಲ್ಲರನ್ನೂ ಕಳೆದುಕೊಂಡಿದ್ದ ಸುಂಟಿಕೊಪ್ಪದ ನಿಡ್ಯಮನೆಯ ಪ್ರಕೃತಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 92 ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಪ್ರಕೃತಿ.
ಪ್ರಕೃತಿಯನ್ನು ನೋಡುವುದಕ್ಕೆಕಳೆದ ಸೆಪ್ಟೆಂಬರ್ನಲ್ಲಿ ತೆರಳುತ್ತಿದ್ದ ತನ್ನ ತಂದೆ, ಸುಂಟಿಕೊಪ್ಪ ಅಂಚೆ ಕಚೇರಿ ಸಿಬ್ಬಂದಿಯಾಗಿದ್ದ ನಿಡ್ಯಮನೆ ಅಶೋಕ, ಶಿಕ್ಷಕಿಯಾಗಿದ್ದ ತಾಯಿ ಹೇಮಾವತಿ, ಸಹೋದರ– ಸಹೋದರಿ ಪ್ರಯಾಣಿಸುತ್ತಿದ್ದ ಕಾರು ಸುಳ್ಯದ ಬಳಿ ನಿಯಂತ್ರಣ ತಪ್ಪಿ ಕೆರೆಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.
ತನ್ನ ಮನೆಯವರನ್ನು ಕಳೆದುಕೊಂಡ ನೋವಿನ ನಡುವೆಯೂ ಪಿಯುನಲ್ಲಿ ಪ್ರಕೃತಿ ಉತ್ತಮ ಸಾಧನೆ ತೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.