ವಿರಾಜಪೇಟೆ (ಕೊಡಗು): ಸಮೀಪದ ಅರಮೇರಿ ಗ್ರಾಮದ ಪನ್ನಂಗಾಲತಮ್ಮೆ ದೇವಾಲಯದ ಮೇಲೆ ಬೃಹತ್ ಗಾತ್ರದ ಮರಬಿದ್ದು, ದೇವಸ್ಥಾನಕ್ಕೆ ಹಾನಿಯಾಗಿದೆ. ದೇವಾಲಯದ ಮುಖ್ಯ ಪ್ರಾಂಗಣ ಹಾಗೂ ಗರ್ಭಗುಡಿಗೆ ಹಾನಿಯುಂಟಾಗಿದೆ.
ಗಾಳಿ ಹಾಗೂ ಮಳೆ ಇರಲಿಲ್ಲ. ಮರದ ಬುಡ ಸಡಿಲಗೊಂಡ ಪರಿಣಾಮ ಮರ ಉರುಳಿದೆ. ದೇವಾಲಯದ ಬಳಿಯಿದ್ದ ಇಬ್ಬರು ಯುವಕರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ವಾರದ ಹಿಂದಷ್ಟೆ ದೇವಾಲಯದ ವಾರ್ಷಿಕೋತ್ಸವ ನಡೆದಿತ್ತು. ಆಗ ಸಾಕಷ್ಟು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಉತ್ಸವ ಮುಕ್ತಾಯಗೊಂಡಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.