ನಂಗಲಿ (ಕೋಲಾರ ಜಿಲ್ಲೆ): ಬೇವಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಯ ಯುವಕ ಉದಯ್ ಕಿರಣ್ ಆತ್ಮಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಎಲ್ಲ ನಾಲ್ವರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಪೆತ್ತಾಂಡ್ಲಹಳ್ಳಿಯ ರಾಜು (24), ಅವರ ತಂದೆ ಗೋಪಾಲಕೃಷ್ಣ (54), ಶಿವರಾಜ್ (34) ಹಾಗೂ ಅವರ ತಂದೆ ಮುನಿವೆಂಕಟಪ್ಪ (70) ಬಂಧಿತರು. ಮುನಿವೆಂಕಟಪ್ಪ ಹಾಗೂ ಗೋಪಾಲಕೃಷ್ಣ ಅಣ್ಣ–ತಮ್ಮಂದಿರು. ಮುನಿವೆಂಕಟಪ್ಪ ಅವರನ್ನು ಶುಕ್ರವಾರವೇ ಬಂಧಿಸಲಾಗಿತ್ತು. ಇನ್ನುಳಿದ ಮೂವರನ್ನು ಶನಿವಾರ ಬಂಧಿಸಲಾಗಿದೆ. ‘ಎಲ್ಲರನ್ನೂ ಬಂಧಿಸಿ, ತನಿಖೆ ತೀವ್ರಗೊಳಿಸಿದ್ದೇವೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.