ADVERTISEMENT

ನಂಗಲಿ: 27ಕ್ಕೆ ಆದರ್ಶ ಶಾಲೆಗೆ ಪ್ರವೇಶ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 4:28 IST
Last Updated 16 ಜುಲೈ 2021, 4:28 IST
ತಾತಿಕಲ್ಲು ಸಮೀಪ ಇರುವ ಆದರ್ಶ ಶಾಲೆ
ತಾತಿಕಲ್ಲು ಸಮೀಪ ಇರುವ ಆದರ್ಶ ಶಾಲೆ   

ನಂಗಲಿ: ತಾತಿಕಲ್ಲು ಸಮೀಪ ಇರುವ ಆದರ್ಶ ವಿದ್ಯಾಲಯದಲ್ಲಿ 2020-21ನೇ ಸಾಲಿನಡಿ ಆರನೇ ತರಗತಿ ಪ್ರವೇಶಕ್ಕೆ ಜುಲೈ 27ರಂದು ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಪ್ರಾಂಶುಪಾಲ ಬಿ.ಕೆ. ನಟರಾಜ್ ತಿಳಿಸಿದ್ದಾರೆ.

ಆದರ್ಶ ಶಾಲೆಯ ದಾಖಲಾತಿಗಾಗಿ ಈ ಹಿಂದೆ ಏ. 25ರಂದು ಪರೀಕ್ಷೆ ನಿಗದಿಪಡಿಸಲಾಗಿತ್ತು. ಆದರೆ, ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್ ಕಾರಣದಿಂದ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು.

ಕೊರೊನಾ ಸೋಂಕು ಕಡಿಮೆಯಾಗಿರುವುದರಿಂದ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರ ಆದೇಶದಂತೆ ಪರೀಕ್ಷೆ ನಡೆಯಲಿದೆ. ಎಸ್.ಒ.ಪಿ ಪ್ರಕಾರ ಪರೀಕ್ಷಾ ಕೇಂದ್ರಗಳನ್ನು ಸಹ ನಿಗದಿಪಡಿಸಲಾಗಿದೆ. ನಂತರ ಆದರ್ಶ ಶಾಲೆಗೆ ದಾಖಲಾತಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.