ಬಂಗಾರಪೇಟೆ: ಪಟ್ಟಣದ ಗಾಂಧಿನಗರದ ಆಂಜನೇಯ ವಿಗ್ರಹ ಪ್ರತಿಷ್ಠಾಪನೆಯ ಐದನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಂಕ್ರಾಂತಿ ಭೋಗಿ ಹಬ್ಬ ನಡೆಯಿತು.
ಹಬ್ಬದ ಪ್ರಯುಕ್ತ ಮುಂಜಾನೆಯಿಂದಲೇ ರಾಮಕೋಟಿ ಭಜನೆ, ವಿಗ್ರಹಕ್ಕೆ ವಿಶೇಷ ಅಲಂಕಾರ, ವಿಶೇಷ ಪೂಜೆ, ಭಕ್ತರಿಗೆ ಅನ್ನ ಸಂತರ್ಪಣೆ ಮಾಡ ಲಾಯಿತು.
ಸಂಜೆ ಪೊಲೀಸ್ ಠಾಣೆ ಹಿಂಭಾಗ ಇರುವ ಊರು ಬಾಗಿಲಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಕ್ರಾಂತಿ ಪ್ರಯುಕ್ತ ಪಟ್ಟಣದ ಪ್ರಮುಖ ದೇಗುಲಗಳಲ್ಲಿ ಭಕ್ತರು ದೀಪಗಳನ್ನು ಬೆಳಗಿ, ಪೂಜೆ ಸಲ್ಲಿಸಿದರು. ಇದು ಗಾಂಧಿನಗರ, ಕುಂಬಾರ ಪಾಳ್ಯ, ಭೋವಿ ನಗರದ ನಿವಾಸಿಗಳ ರೂಢಿ ಕೂಡ ಹೌದು.
ಹಬ್ಬದ ಆಚರಣೆಯಲ್ಲಿ ಹಳ್ಳಿಗಿಂತ ಪಟ್ಟಣ ಏನು ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಸ್ಥಳೀಯ ನಿವಾಸಿಗಳು ಆಚರಣೆ ಮಾಡಿಕೊಂಡು ಬರುತ್ತಿರುವುದು ಹೆಗ್ಗಳಿಕೆ. ಆ. 15ರಂದು ಎತ್ತುಗಳ ಪೂಜೆ, ಓಟ ಸ್ಪರ್ಧೆ ನಡೆಯಲಿದೆ. ುಖಂಡರಾದ ಅಪ್ಪಯ್ಯ ಗೌಡ, ನಾರಾಯಣ ಮೇಸ್ತ್ರಿ, ಪ್ರಭು, ಕುಂಬಾರಪಾಳ್ಯ ಮಂಜು, ವೆಂಕಟರಮಣ, ಮುರಳಿ, ಕೃಷ್ಣ, ನಾರಾಯಣಸ್ವಾಮಿ, ರಮೇಶ್, ಚಿಕ್ಕಹೊಸಹಳ್ಳಿ ಮಂಜು, ಶ್ರೀನಿವಾಸ್, ಶ್ರೀಧರ್, ಕಿಶೋರ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.