ADVERTISEMENT

ಕೆಜಿಎಫ್‌: ಪಿಎಸ್‌ಐ ಮೇಲೆ ಹಲ್ಲೆಮತ್ತೊಬ್ಬ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 4:58 IST
Last Updated 14 ಮಾರ್ಚ್ 2021, 4:58 IST
ಪ್ರಶಾಂತ್
ಪ್ರಶಾಂತ್   

ಕೆಜಿಎಫ್‌: ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ಸಬ್‌ ಇನ್‌ಸ್ಪೆಕ್ಟರ್ ಹರಿನಾಥ್ ಮೇಲೆ ಹಲ್ಲೆ ಮಾಡಿದ್ದ ಮತ್ತೊಬ್ಬ ಆರೋಪಿ ಪ್ರಶಾಂತ್‌ ಆಲಿಯಾಸ್‌ ಲಾಲ್‌ ಎಂಬುವನನ್ನು ಆಂಡರ್‌ಸನ್‌ಪೇಟೆ ಪೊಲೀಸರು ಶನಿವಾರಬಂಧಿಸಿದ್ದಾರೆ.

ಮಾ. 13 ತಡರಾತ್ರಿಆರೋಪಿ ಅಪೇನ್‌ನನ್ನು ಬಂಧಿಸಲು ಪೊಲೀಸರು ಹೋಗಿದ್ದಾಗ, ಆರೋಪಿ ಅಪೇನ್ ಜೊತೆಯಲ್ಲಿದ್ದ ಲಾಲ್‌ ಹಲ್ಲೆ ನಡೆಸಿ ಪರಾರಿಯಾಗಿದ್ದನು. ಆರೋಪಿ ಬ್ಯಾಂಡ್‌ ಲೈನ್‌ ನಿವಾಸಿಯಾಗಿದ್ದಾನೆ. ಹಲ್ಲೆ ನಡೆದ ನಂತರ ಆರೋಪಿಗಳನ್ನು ಚೆನ್ನೈಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ವಸತಿ ಕಲ್ಪಿಸಿಕೊಟ್ಟಿದ್ದ ಸೂಸೈಪಾಳ್ಯದ ಸಂತೋಷ್‌ ಆಲಿಯಾಸ್ ಅಪ್ಪು, ಕಾರು ಚಾಲಕ ದಿನೇಶ್‌ ಕುಮಾರ್‌ ನನ್ನು ಕೂಡ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT