ADVERTISEMENT

ಬಂಗಾರಪೇಟೆ: ಜಮೀನು ವಿವಾದ- ತಮ್ಮನಿಂದಲೇ ಅಣ್ಣನ ಕೊಲೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 19:30 IST
Last Updated 18 ಆಗಸ್ಟ್ 2025, 19:30 IST
ವೆಂಕಟಾ ಚಲಪತಿ
ವೆಂಕಟಾ ಚಲಪತಿ   

ಬಂಗಾರಪೇಟೆ: ಜಮೀನು ವಿವಾದದ ದಾಯಾದಿ ಕಲಹದಲ್ಲಿ ಸೋದರನೇ ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೂದಿಕೋಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಾಲ್ಲೂಕಿನ ರಾಮಾಪುರದಲ್ಲಿ ಸೋಮವಾರ ಮುಂಜಾನೆ ಶೆಡ್‌ನಲ್ಲಿದ್ದ ಕುರಿಗಳಿಗೆ ಮೇವು ನೀಡಲು ಹೋದ ಅಣ್ಣನನ್ನು ಹಿಂಬಾಲಿಸಿದ ಸೋದರ, ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಚಲಪತಿ ಅಲಿಯಾಸ್ ವೆಂಕಟಾಚಲಪತಿ (54) ಕೊಲೆಯಾದ ಅಣ್ಣ. ಪಕ್ಕದ ಮನೆಯಲ್ಲಿ ವಾಸ ಮಾಡುವ ಸೋದರ ಮುನಿರಾಜು (40) ಕೊಲೆ ಆರೋಪಿ. 

ಜಮೀನು ವಿವಾದದ ಕಾರಣದಿಂದ ಇಬ್ಬರ ನಡುವೆ ಹಲವು ಸಲ ಜಗಳ ನಡೆದು ನ್ಯಾಯ ಪಂಚಾಯಿತಿ ನಡೆದಿತ್ತು.

ADVERTISEMENT

ಕುರಿ ಶೆಡ್‌ಗೆ ವೆಂಕಟಾಚಲಪತಿ ತೆರಳುವ ಹಾಗೂ ನಂತರ ಸೋದರ ಮುನಿರಾಜು ಶೆಡ್‌ಗೆ ತೆರಳಿ ಬಾಗಿಲು ಹಾಕಿಕೊಳ್ಳುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕೊಲೆ ಮಾಡಿದ ಬಳಿಕ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಸ್ಥಳಕ್ಕೆ ಎಫ್‌ಎಸ್ಎಲ್ ತಂಡ ಹಾಗೂ ಕೆಜಿಎಫ್ ಪೊಲೀಸ್ ವರಿಷ್ಟಾಧಿಕಾರಿ ಶಿವಾಂಶು ರಾಜಪೂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.